ಬಳ್ಳಾರಿ:ನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆ ಅಡ್ಡಿಯಾಯಿತು.
ಜಿಟಿಜಿಟಿ ಮಳೆಯಲ್ಲಿ ಆಹಾರ ಕಿಟ್ಗಾಗಿ ಕಾದು ನಿಂತ ಕಟ್ಟಡ ಕಾರ್ಮಿಕರು - ಬಳ್ಳಾರಿ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ವಿರತಣೆ ಕಾರ್ಯಕ್ರಮ
ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
![ಜಿಟಿಜಿಟಿ ಮಳೆಯಲ್ಲಿ ಆಹಾರ ಕಿಟ್ಗಾಗಿ ಕಾದು ನಿಂತ ಕಟ್ಟಡ ಕಾರ್ಮಿಕರು building-workers-waiting-for-food-kit-in-the-rain](https://etvbharatimages.akamaized.net/etvbharat/prod-images/768-512-12499037-thumbnail-3x2-dkdk.jpg)
ಕಟ್ಟಡ ಕಾರ್ಮಿಕರು
ಜಿಟಿಜಿಟಿ ಮಳೆಯಲ್ಲಿ ಆಹಾರ ಕಿಟ್ಗಾಗಿ ಕಾಯ್ದು ನಿಂತ ಕಟ್ಟಡ ಕಾರ್ಮಿಕರು
ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಕಿಟ್ ವಿರತಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಿಟ್ಗಳನ್ನು ಪಡೆಯಲು ಬಂದಿದ್ದ ನೂರಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಟಪ ಎದುರು ಸುರಿಯುತ್ತಿದ್ದ ಮಳೆಯಲ್ಲೇ ಸಾಲುಸಾಲಾಗಿ ನಿಂತ ದೃಶ್ಯ ಕಂಡು ಬಂತು.