ಕರ್ನಾಟಕ

karnataka

By

Published : Jul 27, 2020, 10:31 PM IST

ETV Bharat / city

ಸಮಯಾನುಸಾರ ಊಟ, ಚಿಕಿತ್ಸೆಯ ಕೊರತೆ : ಬಳ್ಳಾರಿ ಸೋಂಕಿತರ ಗಂಭೀರ ಆರೋಪ

ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೋವಿಡ್ -19 ಕೇರ್​ ಸೇಂಟರ್​​ನ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಹಾರ ಮತ್ತು ನೀರನ್ನು ನೀಡುತ್ತಿಲ್ಲ. ಹಾಗೆಯೇ ಸ್ವಚ್ಛತಾ ಕಾರ್ಯ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

bellary-corona-patient-problem
ಬಳ್ಳಾರಿ ಸೋಂಕಿತರ ಆರೋಪ

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸಮಯಾನುಸಾರ ಊಟ-ತಿಂಡಿ ಹಾಗೂ ಸೂಕ್ತ ಚಿಕಿತ್ಸೆಯ ಕೊರತೆ ಇದೆ ಎಂಬ ಆರೋಪ ಕೇಳಿ ಬಂದಿದೆ.

ನಗರ ಹೊರವಲಯದ ಹೊಸಪೇಟೆ ರಸ್ತೆಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೋವಿಡ್ -19 ಕೇರ್​ ಸೇಂಟರ್​​ನಲ್ಲಿರುವ ಸೋಂಕಿತರಿಗೆ ಪ್ರತಿದಿನ ಸರಿಯಾದ ಸಮಯಕ್ಕೆ ಚಿಕಿತ್ಸೆ, ಊಟ, ತಿಂಡಿ ಹಾಗೂ ನೀರು ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಅಲ್ಲದೇ, ಸ್ವಚ್ಛತೆಯ ಕೊರತೆ ಕೂಡ ಕಾಡುತ್ತಿದೆ. ಶೌಚಗೃಹ ಹಾಗೂ ಸ್ನಾನಗೃಹವೂ ಕೂಡ ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ಬೇರೆ ರೋಗಗಳು ಹರಡುವ ಭಯದಲ್ಲಿ ಸೋಂಕಿತರಿದ್ದಾರೆ.

ಬಳ್ಳಾರಿ ಸೋಂಕಿತರಿಗೆ ಸಮಯಾನುಸಾರ ಊಟ, ಚಿಕಿತ್ಸೆ ಕೊರತೆ

ಈ ಬಗ್ಗೆ ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದ್ರೂ ಕೂಡ ಇಲ್ಲಿನ ಅಧಿಕಾರಿಗಳು ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಕೇವಲ ಇಂದಿನ ಸಮಸ್ಯೆಯಲ್ಲ. ಕಳೆದ ಒಂದು ವಾರದಿಂದಲೂ ಇದೇ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸೋಂಕಿತರು ಮನವಿ ಮಾಡಿದ್ದಾರೆ.

ABOUT THE AUTHOR

...view details