ಕರ್ನಾಟಕ

karnataka

ETV Bharat / city

ಗಣಿನಾಡಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಹೂ ಮಾರಾಟಗಾರ ಪಾರು - ಕೂಡ್ಲಿಗಿ ಕರಡಿ ದಾಳಿ

ಕೂಡ್ಲಿಗಿ ತಾಲೂಕಿನ ಪೊಪ್ಲಾಪುರ ಗ್ರಾಮದಲ್ಲಿ ಹೂ ಮಾರಾಟ ಮಾಡಲು ಹೊರಟಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದೆ.

Bellary kudligi bear attack
Bellary kudligi bear attack

By

Published : May 31, 2020, 1:09 PM IST

ಬಳ್ಳಾರಿ: ಹೂ ಮಾರಾಟಗಾರನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಕೂಡ್ಲಿಗಿ ತಾಲೂಕಿನ ಪೊಪ್ಲಾಪುರದಲ್ಲಿ ನಡೆದಿದೆ.

ಟಿ.ಚಂದ್ರಪ್ಪ (35 ವರ್ಷ) ಎಂಬುವರು ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹೂವನ್ನು ಮಾರಾಟ ಮಾಡಲು ಭತ್ತನಹಳ್ಳಿಗೆ ಹೋಗುವಾಗ ದಾರಿ ಮಧ್ಯೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಪ್ಪ ಅವರನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details