ಬಳ್ಳಾರಿ : ಸಿದ್ದರಾಮೋತ್ಸವ ಎಂದರೆ ಇದೇನು ಹಂಪಿ ಉತ್ಸವ, ಸಿದ್ಧಗಂಗಾ ಮಠದ ಉತ್ಸವದಂತೆಯೇ? ಇನ್ನು ಮುಂದೆ ಆಗಸ್ಟ್ 3 ಸಿದ್ದರಾಮೋತ್ಸವ ಅಂತ ಶಾಬಾದಿಮಠ ಕ್ಯಾಲೆಂಡರ್ನಲ್ಲಿ ಹಾಕಿಸಬೇಕು. ಸಿದ್ದರಾಮೋತ್ಸವ ಅಂತ ಕಾಂಗ್ರೆಸ್ಸಿನವರು ಆಚರಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಉತ್ಸವ ಮೂರ್ತಿ ಮಾಡುತ್ತಿದ್ದಾರೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೀಸಲಾತಿ ಲಾಭ ಪಡೆದ ರಾಜಕೀಯ ನಾಯಕರಿಗೆ ನಾನು ಉತ್ತರ ಕೊಡಲ್ಲ. ಕಾಂಗ್ರೆಸ್ನವರು ಕೇವಲ ವೋಟ್ ಬ್ಯಾಂಕ್ಗಾಗಿ ಈ ಸಮುದಾಯಗಳನ್ನು ಬಳಸಿಕೊಂಡರು. ಸ್ವಯಂ ಘೋಷಿತ ಹಿಂದುಳಿದ ನಾಯಕ ಸಿದ್ದರಾಮಯ್ಯ ಯಾಕೆ ಮೀಸಲಾತಿ ಕೊಡಲಿಲ್ಲ ಎಂದು ಪ್ರಶ್ನಿಸಿದರು.