ಚಿಕ್ಕೋಡಿ (ಬೆಳಗಾವಿ):ಮಹಾರಾಷ್ಟ್ರದ ಜತ್ತು ಪಟ್ಟಣಕ್ಕೆ ನೀರು ಕೊಡುವುದು ಹಾಗೂ ಅವರಿಂದ ನಮ್ಮ ಭಾಗಕ್ಕೆ ನೀರು ಪಡೆಯುವ ಬಗ್ಗೆ ಮಾತುಕತೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಮಹಾರಾಷ್ಟ್ರಕ್ಕೆ ನೀರು ಕೊಡುವ ಬಗ್ಗೆ ಮಾತುಕತೆಯಾಗಿದೆ: ಸಚಿವ ರಮೇಶ ಜಾರಕಿಹೊಳಿ - Talk about water supply to Maharashtra
ನಾವು ಮಹಾರಾಷ್ಟ್ರಕ್ಕೆ 4 ಟಿಎಂಸಿ ಹಾಗೂ ಅವರು ನಮಗೆ 6 ಟಿಎಂಸಿ ನೀರು ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಅವರು, ನಾವು ಮಹಾರಾಷ್ಟ್ರಕ್ಕೆ 4 ಟಿಎಂಸಿ ಹಾಗೂ ಅವರು ನಮಗೆ 6 ಟಿಎಂಸಿ ನೀರು ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ಖಾತೆ ಹಂಚಿಕೆ ಬಗ್ಗೆ ಸಚಿವರಲ್ಲಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಣ್ಣ-ತಮ್ಮಂದಿರ ಪರಿಹಾರದ ವಿಚಾರವನ್ನು ನ್ಯಾಯಾಲಯದಲ್ಲಿ ಸರಿಪಡಿಸ್ತಾರೆ. ಹಾಗೆಯೇ ಸಚಿವರೂ ಕೂಡಾ ತಮ್ಮ ಒಳಜಗಳ ಸರಿಪಡಿಸಿಕೊಳ್ಳುತ್ತಾರೆ. ಸಿಎಂ ಸಮಸ್ಯೆ ಬಗೆಹರಿಸಲು ಸಮರ್ಥರಿದ್ದಾರೆ, ಎಲ್ಲವೂ ಸರಿ ಹೋಗುತ್ತದೆ ಎಂದರು. ಮಹೇಶ ಕುಮಟಳ್ಳಿ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಮಾರ್ಚ್ ನಂತರ ಕುಮಟಳ್ಳಿ ಸಚಿವರಾಗುತ್ತಾರೆ ಎಂದರು.