ಕರ್ನಾಟಕ

karnataka

ETV Bharat / city

ಮಾದರಿ ಬದುಕು.. ಮಗ IPS ಅಧಿಕಾರಿಯಾದ್ರೂ ತಗಡಿನ ಶೆಡ್ಡಿನಲ್ಲೇ ತಂದೆ-ತಾಯಿ ಸರಳ ಜೀವನ! - undefined

IPS officer's father and mother staying at roof sheet house: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಟ್ರೈನಿ ಐಪಿಎಸ್ ಅಧಿಕಾರಿಯಾಗಿ ಮಗ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬೆಳೆಗಾವಿ ಜಿಲ್ಲೆಯಲ್ಲಿರುವ ಇವರ ತಂದೆ-ತಾಯಿ ತಗಡಿನ ಶೆಡ್ಡಿನಲ್ಲೇ ಸರಳ ಜೀವನ ನಡೆಸುತ್ತಿದ್ದಾರೆ. ಈ ಮೂಲಕ ಅವರು ಮಾದರಿಯಾಗಿದ್ದಾರೆ.

son IPS officer Although parents living in small house in belgaum district
ಮಗ ಐಪಿಎಸ್ ಅಧಿಕಾರಿಯಾದ್ರೂ ತಗಡಿನ ಶೆಡ್ಡಿನಲ್ಲಿಯೇ ತಂದೆ-ತಾಯಿ ಸರಳ ಜೀವನ..!

By

Published : Jan 2, 2022, 5:04 PM IST

ಬೆಳಗಾವಿ: ಸಾಧಿಸುವ ಛಲ, ಗಟ್ಟಿತನದ ಆತ್ಮವಿಶ್ವಾಸವೊಂದಿದ್ದರೆ ಸಾಕು, ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜಿಲ್ಲೆಯ ಮೋಳೆ ಗ್ರಾಮದ ಜಗದೀಶ ತಾಜಾ ಉದಾಹರಣೆ. ಜಗದೀಶ 29ನೇ ವಯಸ್ಸಿನಲ್ಲೇ ಐಪಿಎಸ್ ಅಧಿಕಾರಿ ಹುದ್ದೆ ಅಲಂಕರಿಸುವ ಮೂಲಕ ಜಿಲ್ಲೆ ಮತ್ತು ಕರುನಾಡಿಗೆ ಕೀರ್ತಿ ತಂದಿದ್ದರೆ, ಈತನ ತಂದೆ-ತಾಯಿ ತಮ್ಮ ಸರಳ ಜೀವನದ ಮೂಲಕ ದೇಶಕ್ಕೆ ಮಾದರಿ ಆಗಿದ್ದಾರೆ.

ಹೌದು, ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದವರಾದ ಜಗದೀಶ ಅಡಹಳ್ಳಿ ಅವರು 2019-20ನೇ ಸಾಲಿನಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 440ನೇ ರ‍್ಯಾಂಕ್‌ ಪಡೆದು ಸದ್ಯ ಐಪಿಎಸ್ ತರಬೇತಿ ಬಳಿಕ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಟ್ರೈನಿ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಗ ಐಪಿಎಸ್ ಅಧಿಕಾರಿಯಾದ್ರೂ ತಗಡಿನ ಶೆಡ್ಡಿನಲ್ಲಿಯೇ ತಂದೆ-ತಾಯಿ ಸರಳ ಜೀವನ..!

ಸಾಧನೆಗೆ ಸ್ಫೂರ್ತಿ ಬಡತನ, ಸತತ ಓದು..
ಶ್ರೀಕಾಂತ-ಸುಮಿತ್ರಾ ಅಡಹಳ್ಳಿ ದಂಪತಿಗೆ ಕಿರಿಯ ಪುತ್ರನಾಗಿ ಜಗದೀಶ ಜನಿಸುತ್ತಾರೆ. ಶ್ರೀಕಾಂತ್ ದಂಪತಿಗೆ ನಾಲ್ವರು ಮಕ್ಕಳಿದ್ದು, ಜಗದೀಶ ಓದಿನಲ್ಲಿ ಸದಾ ಮುಂದಿದ್ದರು. ಮೋಳೆ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ 80.06ರಷ್ಟು ಅಂಕ ಪಡೆದಿದ್ದರು. ಪಿಯುಸಿಯನ್ನು ಅಥಣಿ ತಾಲೂಕಿನ ಜಾಧವಜೀ ಆನಂದಜೀ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 89ರಷ್ಟು ಅಂಕ ಪಡೆದು ಉತ್ತಮ ಸಾಧನೆಗೈದರು. ಪದವಿಯನ್ನು ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ 87ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು. ಇದಾದ ಬಳಿಕ ಸಿವಿಲ್ ಸರ್ವಿಸ್‌ಗೆ ಸೇರಬೇಕೆಂದು 2014ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದರು.

ಸಾಧನೆಗೆ ಆತ್ಮವಿಶ್ವಾಸ ಅತ್ಯಮೂಲ್ಯ ಆಸ್ತಿ..
ಯಾವುದೇ ಸಾಧನೆಗೂ ಆತ್ಮವಿಶ್ವಾಸ ಎಂಬುದು ಅತ್ಯಮೂಲ್ಯ ಆಸ್ತಿಗಳಲ್ಲೊಂದು. ಇದನ್ನು ಮನಗಂಡ ಜಗದೀಶ ಆತ್ಮವಿಶ್ವಾಸವನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿಕೊಂಡು ಸದ್ಯ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿ ಉನ್ನತ ಸ್ಥಾನಕ್ಕೇರಿದ್ದಾರೆ. ಜೀವನದಲ್ಲಿ ಯಾರನ್ನೋ ಅನುಕರಿಸಿ ನಾವೇನೋ ಆಗಲು ಸಾಧ್ಯವಿಲ್ಲ. ಬೇರೆಯವರನ್ನು ಮಾದರಿಯನ್ನಾಗಿಟ್ಟುಕೊಂಡು ನಮ್ಮ ಜೀವನದ ಯಶಸ್ಸಿಗೆ ನಾವೇ ಏನಾದರೂ ಮಾಡಬೇಕು. ಕಷ್ಟಪಡಬೇಕು. ಗುರಿ ಸಾಧನೆಗೆ ನಮ್ಮದೇ ದಾರಿ ಕಂಡುಕೊಳ್ಳಬೇಕು. ಇದರ ಜೊತೆಗೆ ಸಾಧಕರ ಯಶೋಗಾಥೆಗಳನ್ನು ಓದುವುದರಿಂದ ಪ್ರೇರಣೆ ದೊರಕುತ್ತದೆ. ಮನೋಬಲ ಹೆಚ್ಚುತ್ತದೆ. ಸಮಸ್ಯೆ, ಸಂಕಷ್ಟಗಳ ಸಂದರ್ಭವನ್ನು ಎದುರಿಸುವ ಆತ್ಮಸ್ಥೈರ್ಯ ನಮಗೆ ದೊರಕುತ್ತದೆ. ಇದರಿಂದ ನಾವು ಅಂದುಕೊಂಡ ಸಾಧನೆಯ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂಬುದು ಐಪಿಎಸ್ ಅಧಿಕಾರಿ ಜಗದೀಶ ಅವರ ಮಾತುಗಳು.

ಸಕ್ಕರೆ ಕಾರ್ಖಾನೆ ಚಾಲಕನ ಮಗ ಐಪಿಎಸ್ ಅಧಿಕಾರಿ..
ಐಪಿಎಸ್ ಅಧಿಕಾರಿ ಜಗದೀಶ ಅಡಹಳ್ಳಿ ಅವರ ತಂದೆ ಶ್ರೀಕಾಂತ್ ಮಧ್ಯಮ ವರ್ಗದಲ್ಲಿ ಜನಿಸಿದ್ದು, ಜೀವನ ನಿರ್ವಹಣೆಗೆ ಅಥಣಿ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ತಮಗೆ ಬರುವ ಅಷ್ಟೊ ಇಷ್ಟೊ ಸಂಬಳದಲ್ಲಿ ಶ್ರೀಕಾಂತ್ ತಮ್ಮ ನಾಲ್ವರು ಮಕ್ಕಳಲ್ಲಿ ಇಬ್ಬರು ಪುತ್ರರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದ್ದಾರೆ. ಒಬ್ಬ ಐಪಿಎಸ್ ಅಧಿಕಾರಿಯಾದ್ರೆ ಮತ್ತೊಬ್ಬ ಸಿಎ ಓದುತ್ತಿದ್ದಾರೆ.

ಈ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಶ್ರೀಕಾಂತ್, ಪುತ್ರ ಐಪಿಎಸ್ ಅಧಿಕಾರಿ ಆಗಿರುವುದು ನನಗೆ ತುಂಬಾ ಸಂತೋಷ ತಂದಿದೆ. ನಾನು ಒಬ್ಬ ಸಾಧಾರಣ ಚಾಲಕ. ಈಗ ನನ್ನ ಮಗ ಯುಪಿಎಸ್‌ಸಿ ಪಾಸ್​ ಆಗಿರುವುದು ನನ್ನ ಕುಟುಂಬ, ಗ್ರಾಮ ಸೇರಿ ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ. ಮಗನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ ಅಥಣಿಯ ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಕಾಗವಾಡ ಮೋಳೆ ಗ್ರಾಮದ ಜಗದೀಶ ಅಡಹಳ್ಳಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಐಪಿಎಸ್ ಅಧಿಕಾರಿ ಆಗಿ‌ ಕಾರ್ಯನಿರ್ವಹಿಸುತ್ತಿದ್ದರೂ ತಂದೆ- ತಾಯಿ ಇಬ್ಬರೂ ಸರಳ ಜೀವನ ನಡೆಸುತ್ತಿದ್ದಾರೆ. ನಮ್ಮ ಮಕ್ಕಳಂತೆ ಇಂದಿನ ಅಧುನಿಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವವರು ಸತತ ಓದಿನ ಜೊತೆಗೆ ಕಠಿಣಪರಿಶ್ರಮ ಹಾಗೂ ಆತ್ಮವಿಶ್ವಾಸ ನಮ್ಮ ಕನಸುಗಳನ್ನ ನನಸು ಮಾಡುವುದರಲ್ಲಿ ಎರಡು ಮಾತಿಲ್ಲ. ಐಎಎಸ್ ಕನಸುಗಳನ್ನು ಕಾಣುತ್ತಿರುವ ಬಡಮಕ್ಕಳು, ಯುವ ಸಮುದಾಯ ಸಾಧಕರ ಜೀವನಗಳನ್ನ ಆದರ್ಶವಾಗಿಟ್ಟು ತಮ್ಮ ಗುರಿ ಸಾಧನೆಗೆ ಅಣಿಯಾಗಬೇಕಿದೆ.

ಇದನ್ನೂ ಓದಿ:ತಜ್ಞರ ಸಲಹಾ ಸಮಿತಿ ವರದಿಯಲ್ಲಿ ಲಾಕ್​ಡೌನ್ ಪ್ರಸ್ತಾಪ.. ರಾಜ್ಯಕ್ಕೆ ಮತ್ತೊಮ್ಮೆ ಬೀಳುತ್ತಾ ಬೀಗ?

For All Latest Updates

TAGGED:

ABOUT THE AUTHOR

...view details