ಕರ್ನಾಟಕ

karnataka

ETV Bharat / city

ಶಾರ್ಟ್‌ಸರ್ಕ್ಯೂಟ್‌ನಿಂದ ಗುಡಿಸಲಿಗೆ ಬೆಂಕಿ: ಜಾನುವಾರುಗಳು ಸಾವು - undefined

ಗುಡಿಸಲಿನ ಬದಿಯಲ್ಲಿ ಹೆಸ್ಕಾಂ ವಿದ್ಯುತ್ ತಂತಿಗಳು ಹಾದು ಹೋಗಿದ್ದರ ಪರಿಣಾಮ ಗುಡಿಸಲಿಗೆ ಬೆಂಕಿ ತಗುಲಿ ನಾಲ್ಕು ಜಾನುವಾರುಗಳು ಮೃತಪಟ್ಟಿವೆ.

ನಾಲ್ಕು ಜಾನುವಾರುಗಳು ಸಾವು

By

Published : Jun 5, 2019, 6:47 PM IST

ಚಿಕ್ಕೋಡಿ: ಶಾರ್ಟ್ ​ಸರ್ಕ್ಯೂಟ್​ನಿಂದಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು, ನಾಲ್ಕು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಹೊರವಲಯದ ಕಮತೆ ತೋಟದಲ್ಲಿ ನಡೆದಿದೆ.

ಸದಲಗಾ ಪಟ್ಟಣದ ಬಾಳಪ್ಪ ಮಲ್ಲಪ್ಪ ಕಮತೆ ಅವರ ಎರಡು ಎತ್ತು, ಒಂದು ಹಸು, ಒಂದು ಎಮ್ಮೆ ಒಟ್ಟು ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಬೆಂಕಿ ನಂದಿಸಲು ಸುತ್ತಮುತ್ತಲಿನ ರೈತರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ.

ಗುಡಿಸಲಿನ ಬದಿಯಲ್ಲಿ ಹೆಸ್ಕಾಂ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಈ ಕುರಿತು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ತೆರವುಗೊಳಿಸಿರಲಿಲ್ಲ.ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಲಗಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details