ಕರ್ನಾಟಕ

karnataka

By

Published : Mar 11, 2020, 9:06 PM IST

ETV Bharat / city

ಪುನರ್ವಸತಿ, ಬೆಳೆ ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಚೇರಿ ಎದುರು ರೈತರಿಂದ ಪ್ರತಿಭಟನೆ

ಪುನರ್ವಸತಿ, ಬೆಳೆ ಪರಿಹಾರ ಮತ್ತು‌ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಅಥಣಿ ತಾಲೂಕಿನ ಹುಲಬಾಳ ರೈತರಿಂದ ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.

KN_BGM_02_11_farmers_protest_vsl_01_KA10029
ಪುನರ್ ವಸತಿ, ಬೆಳೆ ಪರಿಹಾರಕ್ಕೆ ಆಗ್ರಹ, ಡಿಸಿ ಕಛೇರಿ ಎದುರು ರೈತರಿಂದ ಪ್ರತಿಭಟನೆ

ಬೆಳಗಾವಿ: ಪುನರ್ವಸತಿ, ಬೆಳೆ ಪರಿಹಾರ ಮತ್ತು‌ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಅಥಣಿ ತಾಲೂಕಿನ ಹುಲಬಾಳ ರೈತರಿಂದ ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.

ಪುನರ್ವಸತಿ, ಬೆಳೆ ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಚೇರಿ ಎದುರು ರೈತರಿಂದ ಪ್ರತಿಭಟನೆ

ಹುಲಬಾಳ ಗ್ರಾಮದ 250ಕ್ಕೂ ಹೆಚ್ಚಿನ ಕುಟುಂಬಸ್ಥರು ನದಿ‌ಪಾತ್ರದಲ್ಲಿ ವಾಸಿಸುತ್ತಿದ್ದಾರೆ. ಹಿಪ್ಪರಗಿ ಬ್ಯಾರೇಜಿನ ಹಿನ್ನೀರಿನಿಂದಾಗಿ ಪ್ರತಿವರ್ಷ ಮನೆಗಳು ಮುಳುಗುತ್ತಿವೆ. ಇದರಿಂದ ಕುಟುಂಬದ ಮಕ್ಕಳು, ಜನ- ಜಾನುವಾರುಗಳನ್ನು ಪ್ರತಿವರ್ಷ ಬೇರೆಡೆಗೆ‌ ಸ್ಥಳಾಂತರ ಮಾಡುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಬೇಕು. ನದಿ ಪಾತ್ರದಲ್ಲಿ ಹಾನಿಯಾದ ಬೆಳೆಗೆ ಹಾಗೂ ಮನೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರಿಗೆ ಆದಷ್ಟು ಬೇಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ‌ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details