ಬೆಳಗಾವಿ: ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಲ್ಲಿ 16.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಉಪಚುನಾವಣೆ ದೃಷ್ಟಿಯಿಂದ ಮತದಾರರ ಮನ ಸೆಳೆಯಲು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೊಳವಿ- ಗೋಕಾಕ್ ಮಧ್ಯದ ರಸ್ತೆ ಕಾಮಗಾರಿಗೆ ಅವರು ಇವತ್ತು ಚಾಲನೆ ಕೊಟ್ಟರು. ಗೋಕಾಕ ತಾಲೂಕಿನ ಖನಗಾಂವ, ಮಿಡಕನಟ್ಟಿ, ಕೊಳವಿ, ಮಕ್ಕಳಗೇರಿ ಗ್ರಾ.ಪಂ ವ್ಯಾಪ್ತಿಯ 8 ಗ್ರಾಮಕ್ಕೆ ನೆರವಾಗಲಿರುವ ರಸ್ತೆ ಇದಾಗಿದೆ. ಇಲ್ಲಿ ಕಡಿಮೆ ಅವಧಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.