ಕರ್ನಾಟಕ

karnataka

By

Published : Sep 21, 2019, 4:49 PM IST

Updated : Sep 21, 2019, 7:05 PM IST

ETV Bharat / city

ಮತ ಸೆಳೆಯಲು ರಮೇಶ್ ಜಾರಕಿಹೊಳಿ ಪ್ಲಾನ್‌: 16.5 ಕೋಟಿ ರೂ. ರಸ್ತೆ ಕಾಮಗಾರಿಗೆ‌ ಚಾಲನೆ

ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಗೋಕಾಕ್​ ಕ್ಷೇತ್ರದಲ್ಲಿ 16.5 ಕೋಟಿ ರೂ. ವೆಚ್ಚದ ಕಾಮಗಾರಿಗೆ‌ ಚಾಲನೆ‌‌‌ ನೀಡಿದ್ದಾರೆ. ಇದು ಮತದಾರರನ್ನು ಸೆಳೆಯುವ ಯೋಜನೆ ಎಂದು ಜನರು ಮಾತನಾಡಿಕೊಳ್ತಿದ್ದಾರೆ.

16.5 ಕೋಟಿ ರೂ. ರಸ್ತೆ ಕಾಮಗಾರಿಗೆ‌ ಚಾಲನೆ

ಬೆಳಗಾವಿ: ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಗೋಕಾಕ್​ ಕ್ಷೇತ್ರದಲ್ಲಿ 16.5 ಕೋಟಿ ರೂ. ವೆಚ್ಚದ ಕಾಮಗಾರಿಗೆ‌ ಚಾಲನೆ‌‌‌ ನೀಡಿದ್ದಾರೆ.

ಮತ ಸೆಳೆಯಲು ರಮೇಶ್ ಜಾರಕಿಹೊಳಿ ಪ್ಲಾನ್‌

ಉಪಚುನಾವಣೆ ದೃಷ್ಟಿಯಿಂದ ಮತದಾರರ ಮನ ಸೆಳೆಯಲು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ, ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೊಳವಿ- ಗೋಕಾಕ್​ ಮಧ್ಯದ ರಸ್ತೆ ಕಾಮಗಾರಿಗೆ ಅವರು ಇವತ್ತು ಚಾಲನೆ ಕೊಟ್ಟರು. ಗೋಕಾಕ ‌ತಾಲೂಕಿನ ಖನಗಾಂವ, ಮಿಡಕನಟ್ಟಿ, ಕೊಳವಿ, ಮಕ್ಕಳಗೇರಿ ಗ್ರಾ.ಪಂ ವ್ಯಾಪ್ತಿಯ 8 ಗ್ರಾಮಕ್ಕೆ‌ ನೆರವಾಗಲಿರುವ ರಸ್ತೆ ಇದಾಗಿದೆ. ಇಲ್ಲಿ ಕಡಿಮೆ‌ ಅವಧಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದವರು ‌ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೋಕಾಕ್​ ಕ್ಷೇತ್ರದಿಂದ ರಮೇಶ್​ ‌ಜಾರಕಿಹೊಳಿ 5 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಅವರು ಬಹುಮುಖ್ಯ ಪಾತ್ರ ವಹಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ರಮೇಶ್​ ಅನರ್ಹರಾಗಿದ್ದಾರೆ.

ಈ ಕುರಿತ ಸ್ಪೀಕರ್ ಆದೇಶ ಪ್ರಶ್ನಿಸಿ ರಮೇಶ್ ಜಾರಕಿಹೊಳಿ ಸೇರಿದಂತೆ ಅನರ್ಹ ಶಾಸಕರು​ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರ ಮಹತ್ವದ ಅರ್ಜಿ ವಿಚಾರಣೆ‌ ನಡೆಯಲಿದೆ.

Last Updated : Sep 21, 2019, 7:05 PM IST

ABOUT THE AUTHOR

...view details