ಚಿಕ್ಕೋಡಿ: ಇನ್ನೊಬ್ಬಳ ಜೊತೆ ಆಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದಕ್ಕೆ ಮಡದಿಯನ್ನೇ ಕೊಂದ ಕಿರಾತಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ.
ಅಪ್ಪಾಸಾಹೇಬ ಸುರುಡೆ (42) ಬಂಧಿತ ಆರೋಪಿ. ಅಥಣಿ ತಾಲೂಕಿನ ವಿಷ್ಣುವಾಡಿ ಬಳಿ ತನ್ನ ಹೆಂಡತಿ ಉಮಾಶ್ರೀ ಅಪ್ಪಾಸಾಹೇಬ ಸುರುಡೆ (35) ಎಂಬವವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಉಮಾಶ್ರೀ ಜೂನ್ 6ರಿಂದ ಕಾಣೆಯಾಗಿದ್ದಾಳೆ ಎಂದು ಅಥಣಿ ಠಾಣೆಗೆ ದೂರು ನೀಡಿದ್ದ.