ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಈ ಬಾರಿಯೂ ಪ್ರವಾಹ ಬರುವ ಮೂನ್ಸೂಚನೆ ಇರುವ ಕಾರಣ ಬೆಳಗಾವಿಯ ಚಿಕ್ಕೋಡಿ ಪಟ್ಟಣಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿದೆ.
ಪ್ರವಾಹಕ್ಕೂ ಮುನ್ನವೇ ಚಿಕ್ಕೋಡಿಗೆ ಆಗಮಿಸಿದ ಎನ್ಡಿಆರ್ಎಫ್ ತಂಡ: ಕಾರಣ - krishna river flood
ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಬರುವ ಮೂನ್ಸೂಚನೆ ಇರುವ ಕಾರಣ ಚಿಕ್ಕೋಡಿ ಪಟ್ಟಣಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ನದಿ ತೀರದ ಪ್ರದೇಶಗಳನ್ನು ಅಧ್ಯಯನ ಮಾಡಲಿದೆ.
![ಪ್ರವಾಹಕ್ಕೂ ಮುನ್ನವೇ ಚಿಕ್ಕೋಡಿಗೆ ಆಗಮಿಸಿದ ಎನ್ಡಿಆರ್ಎಫ್ ತಂಡ: ಕಾರಣ NDRF team arrive to chikkodi](https://etvbharatimages.akamaized.net/etvbharat/prod-images/768-512-7463072-743-7463072-1591192341947.jpg)
ಎನ್ಡಿಆರ್ಎಫ್ ತಂಡ
ಹೈದರಾಬಾದ್ನಿಂದ ಚಿಕ್ಕೋಡಿಗೆ 20 ಅಧಿಕಾರಿಗಳ ಎನ್ಡಿಆರ್ಎಫ್ ತಂಡ ಬಂದಿದೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಬರುವ ಮುನ್ನವೇ ಈ ತಂಡ ಅಧ್ಯಯನ ನಡೆಸಲಿದೆ.
ಚಿಕ್ಕೋಡಿಗೆ ಆಗಮಿಸಿದ ಎನ್ಡಿಆರ್ಎಫ್ ತಂಡ
ಚಿಕ್ಕೋಡಿ ತಾಲೂಕಿನ ಯಡೂರು, ಇಂಗಳಿ ಹಾಗೂ ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಸೇರಿದಂತೆ ನದಿ ತೀರದ ಪ್ರದೇಶಗಳನ್ನು ಪರಿಶೀಲನೆ ನಡೆಸಲಿದೆ. ಪ್ರವಾಹ ಬಂದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧ್ಯಯನ ಮಾಡಲಿದೆ.