ಕರ್ನಾಟಕ

karnataka

ETV Bharat / city

ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್​ ಪರ ಜಾಮೀನು ಅರ್ಜಿ ಸಲ್ಲಿಸಿದ ವಕೀಲ ಬಿ.ಡಿ. ಪಾಟೀಲ್​ - CRPF soldier Sachin Savant assult case

ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನ​ ಪರ ವಕೀಲ ಬಿ.ಡಿ. ಪಾಟೀಲ್ ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಆನ್‌ಲೈನ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಬಿ.ಡಿ. ಪಾಟೀಲ್​
ಬಿ.ಡಿ. ಪಾಟೀಲ್​

By

Published : Apr 28, 2020, 1:44 PM IST

Updated : Apr 28, 2020, 2:56 PM IST

ಚಿಕ್ಕೋಡಿ: ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್​ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನ​ ಪರ ವಕೀಲ ಬಿ.ಡಿ. ಪಾಟೀಲ್​ ಆನ್‌ಲೈನ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಜಾಮೀನು ಅರ್ಜಿ ಸಲ್ಲಿಸಿದ ಕುರಿತು ವಕೀಲ ಬಿ.ಡಿ. ಪಾಟೀಲ್​ ಪ್ರತಿಕ್ರಿಯೆ

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಚಿಕ್ಕೋಡಿಯ ಮೊದಲ ಜೆಎಂಎಫ್​ಸಿ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇಂದು ಷರತ್ತುಬದ್ಧ ಜಾಮೀನು ಸಿಗುವ ನಿರೀಕ್ಷೆಯಲ್ಲಿ ಸಚಿನ್​ ಪರ ವಕೀಲರು ಇದ್ದಾರೆ. ಮಧ್ಯಾಹ್ನದ ಬಳಿಕ ಬೇಲ್ ಸಿಕ್ಕರೆ ಇವತ್ತೇ ಜೈಲಿನಿಂದ ಸಚಿನ್ ಸಾವಂತ್​ ಬಿಡುಗಡೆಯಾಗಲಿದ್ದಾರೆ.

ಇನ್ನು, ಯೋಧನನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದ್ದು. ಏ.23 ರಂದು ಪೊಲೀಸರು ಹಾಗೂ ಯೋಧನ ನಡುವೆ ಗಲಾಟೆಗೆ ನಡೆದಿತ್ತು.

Last Updated : Apr 28, 2020, 2:56 PM IST

For All Latest Updates

TAGGED:

ABOUT THE AUTHOR

...view details