ಬೆಳಗಾವಿ : ಯುವಕರ ಕೈಯಲ್ಲಿ ಮೊಬೈಲ್ ಬಂದು ದೇಶಿ ಕ್ರೀಡೆಗಳು ಕಣ್ಮರೆ ಆಗುತ್ತಿರುವ ದಿನಗಳಲ್ಲಿ ಕುಂದಾನಗರಿಯ ಯುವ ಸಮೂಹ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಮೊಸರಿನ ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಮನರಂಜಿಸಿದರು. ಅಷ್ಡೇ ಅಲ್ಲದೇ ತಮ್ಮ ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿದರು.
ನಗರದ ಶಾಸಕ ಅಭಯ್ ಪಾಟೀಲ್ ಅವರ ಫಾರ್ಮ್ ಹೌಸ್ ಬಳಿಯ ಮಹಲ್ನಲ್ಲಿ ಅಭಯ್ ಪಾಟೀಲ ಮುಂದಾಳತ್ವದಲ್ಲಿ ಕೆಸರು ಗದ್ದೆ ಓಟ, ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ಹೀಗೆ ವಿವಿಧ ದೇಶೀಯ ಕ್ರೀಡೆಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವು ಯುವಕರು-ಯುವತಿಯರು ಉತ್ಸುಕತೆಯಿಂದ ಭಾಗಿಯಾದರು. ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರಿನ ಗಡಗಿ ಒಡೆಯುವ ಸ್ಪರ್ಧೆ ಗಮನ ಸೆಳೆಯುವಂತಿತ್ತು. ಸ್ಪರ್ಧೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡ ಯುವ ಸಮೂಹ ಖುಷಿಪಟ್ಟರು.