ಕರ್ನಾಟಕ

karnataka

ETV Bharat / city

ನಮ್ಮ ಜೀವನವೆಂಬ ನೌಕೆಗೆ ನಾವೇ ನಾವಿಕರಾಗಬೇಕು: ಎಫ್​ಬಿಯಲ್ಲಿ ಕುಮಟಳ್ಳಿ ಪೋಸ್ಟ್

ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಯೇ ಎಂಬ ಅನುಮಾನವನ್ನು ಅವರ ಫೇಸ್​ಬುಕ್ ಪೋಸ್ಟ್ ಮೂಡಿಸಿದೆ.

By

Published : Mar 3, 2020, 4:28 AM IST

Is Mahesh Kumatalli dissatisfied with BJP
ಶಾಸಕ ಮಹೇಶ್ ಕುಮಟಳ್ಳಿ ಫೇಸ್​ಬುಕ್ ಪೋಸ್ಟ್

ಅಥಣಿ: ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಯೇ ಎಂಬ ಅನುಮಾನವನ್ನು ಅವರ ಫೇಸ್​ಬುಕ್ ಪೋಸ್ಟ್ ಮೂಡಿಸಿದೆ.

ಶಾಸಕ ಮಹೇಶ್ ಕುಮಟಳ್ಳಿ ಫೇಸ್​ಬುಕ್ ಪೋಸ್ಟ್

ಮಹೇಶ್ ಕುಮಟಳ್ಳಿ ಅವರು ಫೇಸ್​ಬುಕ್ ಪೇಜ್​​ನಲ್ಲಿ "ಜೀವನವೆಂಬ ಸಾಗರದಲ್ಲಿ ಕಷ್ಟಕಾರ್ಪಣ್ಯಗಳೆಂಬ ಬಿರುಗಾಳಿ, ಅಬ್ಬರದ ಅಲೆಗಳು, ಜೀವನವೆಂಬ ನೌಕೆಯನ್ನು ದಿಕ್ಕು ಕೆಡಿಸುತ್ತವೆ. ಆದರೆ "ಧೈರ್ಯ ಹಾಗೂ ಆತ್ಮವಿಶ್ವಾಸ" ಎಂಬ ಪ್ರಬಲ ಅಸ್ತ್ರದಿಂದ ನಾವಿಕನಂತೆ ದಾರಿ ಕಂಡುಕೊಳ್ಳುತ್ತಾ, ಜೀವನವೆಂಬ ಸಾಗರದಲ್ಲಿ ನಿರ್ದಿಷ್ಟ ಗುರಿ ತಲುಪಬೇಕು ಎಂದು ಪೋಸ್ಟ್ ಮಾಡಿದ್ದಾರೆ.

ಪ್ರಮುಖವಾಗಿ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಅವರ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಶಾಸಕರ ಎಫ್​ಬಿ ಪೋಸ್ಟ್ ಮತ್ತಷ್ಟು ಕುತೂಹಲ ಮೂಡಿಸಿದೆ.

ABOUT THE AUTHOR

...view details