ಕರ್ನಾಟಕ

karnataka

ETV Bharat / city

ಹಿಜಾಬ್​ ಹೆಸರಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ಕೊಡಬೇಡಿ: ಬೆಳಗಾವಿ ಡಿಸಿಗೆ ಮನವಿ - ಬೆಳಗಾವಿ ಹಿಜಾಬ್​ ವಿವಾದ

ಹಿಜಾಬ್​ ವಿವಾದ ಸಂಬಂಧ ನ್ಯಾಯಾಲಯದ ಆದೇಶವನ್ನು ಸೂಕ್ತವಾಗಿ ಪಾಲಿಸಲು ಕ್ರಮ ವಹಿಸಬೇಕು ಎಂದು ರಾಜ್ಯ ಹ್ಯೂಮನ್ ರೈಟ್ಸ್ ಅಡ್ವೋಕೇಟ್ಸ್ ಫೋರಂನ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

Human Rights Advocates Forum appeals to belagavi dc on hijab issue
ಬೆಳಗಾವಿ ಡಿಸಿಗೆ ಮನವಿ ಸಲ್ಲಿಸಿದ ರಾಜ್ಯ ಹ್ಯೂಮನ್ ರೈಟ್ಸ್ ಅಡ್ವೋಕೇಟ್ಸ್ ಫೋರಂ

By

Published : Feb 17, 2022, 7:00 AM IST

Updated : Feb 17, 2022, 7:08 AM IST

ಬೆಳಗಾವಿ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಸಂಬಂಧ ಧಾರ್ಮಿಕ ಸಂಕೇತಗಳನ್ನು ಸೂಚಿಸುವ ವಸ್ತ್ರಗಳನ್ನು ಧರಿಸುವ ಬಗ್ಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಕೆಲ ಶಾಲಾ-ಕಾಲೇಜುಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ನ್ಯಾಯಾಂಗ ನಿಂದನೆಯಾಗುತ್ತಿರುವುದು ಕಂಡುಬರುತ್ತಿದೆ. ಹಾಗಾಗಿ ನ್ಯಾಯಾಲಯದ ಆದೇಶವನ್ನು ಸೂಕ್ತವಾಗಿ ಪಾಲಿಸಲು ಕ್ರಮ ವಹಿಸಬೇಕು ಎಂದು ರಾಜ್ಯ ಹ್ಯೂಮನ್ ರೈಟ್ಸ್ ಅಡ್ವೋಕೇಟ್ಸ್ ಫೋರಂನ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.


ಹಿಜಾಬ್​ ವಿವಾದ ಸಂಬಂಧ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಕಾಲೇಜುಗಳ ಅಭಿವೃದ್ಧಿ ಮಂಡಳಿ (ಸಿಡಿಸಿ) ಸೂಚನೆಯ ಮೇರೆಗೆ ಇರುವ ಸಮವಸ್ತ್ರ ಸಂಹಿತೆ ಪಾಲಿಸಬೇಕು. ಸಮವಸ್ತ್ರ ಸಂಹಿತೆ ಇರುವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವಸ್ತ್ರಸಂಹಿತೆ ನೀತಿ ಪಾಲಿಸಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಕಾಲೇಜು ಅಭಿವೃದ್ಧಿ ಮಂಡಳಿಯೇ ಇಲ್ಲದ ಕಾಲೇಜುಗಳಲ್ಲಿ ಮತ್ತು ವಸ್ತ್ರಸಂಹಿತೆ ರೂಪಿಸಿರದ ಕಾಲೇಜುಗಳಲ್ಲಿ ಸಹ ಈಗ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ:ಹಿಜಾಬ್​ - ಕೇಸರಿ ವಿವಾದ: ಶೇ 50ರಷ್ಟು ವಿದ್ಯಾರ್ಥಿನಿಯರು ಗೈರು

ಹೈಕೋರ್ಟ್ ಆದೇಶದಲ್ಲಿ ಶಾಲೆಯ ಶಿಕ್ಷಕರಿಗೆ ಯಾವುದೇ ವಸ್ತ್ರಸಂಹಿತೆಯನ್ನು ಸೂಚಿಸಿಲ್ಲ. ಆದರೆ ಕೆಲ ಶಾಲೆಗಳಲ್ಲಿ ಶಿಕ್ಷಕಿಯರಿಗೂ ಹಿಜಾಬ್ ಧರಿಸದಂತೆ ಸೂಚನೆ ನೀಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಶಾಲಾ ಆವರಣದ ಹೊರಗಡೆಯೇ ಮಕ್ಕಳನ್ನು ನಿಲ್ಲಿಸಿ ಅವರ ಬುರ್ಕಾ ಮತ್ತು ಹಿಜಾಬ್ ತೆಗೆಸಲಾಗುತ್ತಿದ್ದು ಇದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ಕೊಡದಂತೆ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Last Updated : Feb 17, 2022, 7:08 AM IST

ABOUT THE AUTHOR

...view details