ಕರ್ನಾಟಕ

karnataka

ETV Bharat / city

ಹುಲಗಬಾಳ ಗ್ರಾಮ ಜಲಾವೃತ: ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

ಕೃಷ್ಣಾ ನದಿಗೆ ಅಧಿಕ ನೀರು ಹರಿದು ಬರುತ್ತಿರುವುದರಿಂದ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಗ್ರಾಮಸ್ಥರನ್ನು ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದೆ.

By

Published : Aug 20, 2020, 8:22 PM IST

Hulagabala Village Water Resources with Krishna River
ಹುಲಗಬಾಳ ಗ್ರಾಮ ಜಲಾವೃತ..ಸುರಕ್ಷಿತ ಸ್ಥಳಗಳಿಗೆ ವಸತಿ ಜನರ ಸ್ಥಳಾಂತರ

ಅಥಣಿ (ಬೆಳಗಾವಿ): ಮಹರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಗ್ರಾಮಸ್ಥರನ್ನು ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದೆ.

ಹುಲಗಬಾಳ ಗ್ರಾಮ ಜಲಾವೃತ..ಸುರಕ್ಷಿತ ಸ್ಥಳಗಳಿಗೆ ವಸತಿ ಜನರ ಸ್ಥಳಾಂತರ

ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ವಸತಿ ಪ್ರದೇಶದಲ್ಲಿ 148 ಕುಟುಂಬಗಳು ವಾಸವಾಗಿದ್ದವು. ಕೃಷ್ಣಾ ನದಿ ನೀರಿನಿಂದ ಈ ವಸತಿ ಪ್ರದೇಶ ದ್ವೀಪದಂತಾಗಿದೆ. ಈ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ಒಂದೇ ಮಾರ್ಗವಿದ್ದು, ಅದು ಕೂಡ ಕೆಲವೇ ಗಂಟೆಗಳಲ್ಲಿ ಜಲಾವೃತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನ-ಜಾನುವಾರುಗಳನ್ನು ಟ್ರ್ಯಾಕ್ಟರ್ ಮುಖಾಂತರ ಹಾಗೂ ಇತರೆ ವಾಹನಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ.

ಇತ್ತ ಗ್ರಾಮ ಜನರು ತಾಲೂಕಾಡಳಿತ ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ಸೂಚನೆ ನೀಡಿದೆ. ಆದರೆ, ನಮಗೆ ಇರುವುದಕ್ಕೆ ಯಾವುದೇ ಮೂಲಭೂತ ವ್ಯವಸ್ಥೆ ಮಾಡಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು, ತಕ್ಷಣವೇ ಜಾನುವಾರುಗಳಿಗೆ ಮೇವು ನೀಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details