ಕರ್ನಾಟಕ

karnataka

By

Published : Feb 6, 2021, 6:29 PM IST

ETV Bharat / city

ಆಶಾ ಕಾರ್ಯಕರ್ತೆ ತೀರಿಕೊಂಡಿದ್ದು ಕಾಯಿಲೆಯಿಂದ, ಲಸಿಕೆಯಿಂದಲ್ಲ; ವೈದ್ಯಾಧಿಕಾರಿ ಸ್ಪಷ್ಟನೆ

ಮಿದುಳಿಗೆ ಸಮರ್ಪಕವಾಗಿ ರಕ್ತ ಸಂಚಾರವಾಗದ ಪರಿಣಾಮ ಆಶಾ ಕಾರ್ಯಕರ್ತೆ ಮೃತಪಟ್ಟಿದ್ದಾರೆ. ಲಸಿಕೆ ಪಡೆದುಕೊಂಡದ್ದು ಅವರ ಸಾವಿಗೆ ಕಾರಣವಲ್ಲ ಎಂದು ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Brain
ಮಿದುಳು

ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ 33 ವರ್ಷದ ಆಶಾ ಕಾರ್ಯಕರ್ತೆ ಸನದಿ ಅವರು ಮಿದುಳಿನ ಪಾರ್ಶ್ವವಾಯು ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಚಿಕ್ಕೋಡಿ ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ಈಟಿವಿ ಭಾರತ್​ಗೆ ಸ್ಪಷ್ಟಪಡಿಸಿದ್ದಾರೆ.

ಜ.22ರಂದು ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಸನದಿ ಅವರು ಫೆ.3ರಂದು ಮೃತಪಟ್ಟಿದ್ದರು. ಲಸಿಕೆ ಪಡೆದ ಎರಡು ಮೂರು ದಿನಗಳ ನಂತರ ಅವರು ಅನಾರೋಗ್ಯಕ್ಕೆ ತುತ್ತಾದರು. ನಂತರ ಅವರಿಗೆ ನೀಡಿದ ಚಿಕಿತ್ಸೆಯಲ್ಲಿ ಮಿದುಳಿಗೆ ಪಾರ್ಶ್ವವಾಯು ಇರುವುದು ಗೊತ್ತಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್​ ಮೇಲೆ ಚಿಕಿತ್ಸೆ ಕೊಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಫೆ.3ರಂದು ಅವರು ಅಸುನೀಗಿದ್ದರು.

ಇದನ್ನೂ ಓದಿ...ದೇಶದಲ್ಲೀಗ ನಡೆಯುತ್ತಿರುವ ರೈತರ ಹೋರಾಟಕ್ಕೆ ಪ್ರಾಯೋಜಕತ್ವವಿದೆ: ಕಡಾಡಿ ಆರೋಪ

ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದರೂ ಆಕೆಯ ಕುಟುಂಬ ಸದಸ್ಯರು ನಿರಾಕರಿಸಿದರು. ಮಿದುಳಿಗೆ ಸಮರ್ಪಕವಾಗಿ ರಕ್ತ ಸಂಚಾರವಾಗದ ಅವರು ಮರಣ ಹೊಂದಿದ್ದಾರೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details