ಕರ್ನಾಟಕ

karnataka

ಚೆನ್ನಮ್ಮ ಸರ್ಕಲ್​ನಲ್ಲಿ ಬಾರುಕೋಲು ಚಳವಳಿ : ನೂರಾರು ರೈತರು ಪೊಲೀಸ್​​ ವಶಕ್ಕೆ

By

Published : Dec 20, 2021, 12:28 PM IST

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​​ ನೇತೃತ್ವದಲ್ಲಿ ಬಾರುಕೋಲು ಚಳುವಳಿಗೆ ಮುಂದಾಗಿದ್ದ ನೂರಾರು ಮಂದಿ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ..

Farmers Protest In Belagavi
ಬಾರುಕೋಲು ಚಳುವಳಿಗೆ ಮುಂದಾದ ರೈತರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ :ವಿವಾದಿತ ಮೂರುಕೃಷಿ‌ ಕಾಯ್ದೆ ವಾಪಸ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​​ ನೇತೃತ್ವದಲ್ಲಿ ಬಾರುಕೋಲು ಚಳವಳಿಗೆ ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾರುಕೋಲು ಚಳವಳಿಗೆ ಮುಂದಾದ ರೈತರನ್ನು ವಶಕ್ಕೆ ಪಡೆದ ಪೊಲೀಸರು..

ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಜಮಾಗೊಂಡ ರೈತರು ಬಾರುಕೋಲ ಬಾರಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದವರೆಗೆ ಬಾರುಕೋಲು ಚಳವಳಿಗೆ ಮುಂದಾಗುತ್ತಿದ್ದಂತೆ ಎಲ್ಲ ರೈತರನ್ನು ಪೊಲೀಸರು ಸಾರಿಗೆ ಬಸ್​​ನಲ್ಲಿ ತುಂಬಿಕೊಂಡು ಸುವರ್ಣ ಗಾರ್ಡನ್​​ನಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ದರು.

ಇದಕ್ಕೂ‌ ಮೊದಲು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದಲ್ಲಿ ದಪ್ಪ ಚರ್ಮದ ಸರ್ಕಾರ ಇದೆ. ಅವರನ್ನು ಸರಿ ದಾರಿಗೆ ತರಲು, ತಿದ್ದಿಬುದ್ದಿ ಹೇಳಲು ಬಾರುಕೋಲು ಚಳುವಳಿ ಹಮ್ಮಿಕೊಂಡಿದ್ದೇವೆ. ಬಿಜೆಪಿಯವರು ರೈತರ ಪರವೋ ಅಥವಾ ವಿರುದ್ಧವೋ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಬೆಳಗಾವಿ ಜನರೇ ಎಂಇಎಸ್‌ ಬ್ಯಾನ್ ಮಾಡಿದ್ದಾರೆ : ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details