ಕರ್ನಾಟಕ

karnataka

ETV Bharat / city

ಕೈ ಮುಗಿತಿವಿ, ನಾಮಪತ್ರ ಹಿಂಪಡೆಯಬೇಡಿ ಎಂದು ಕಾಲಿಗೆರಗಿದ ಪೂಜಾರಿ ಅಭಿಮಾನಿಗಳು!

ಕೈ ಮುಗಿತಿವಿ... ನಾಮಪತ್ರ ಮಾತ್ರ ಹಿಂಪಡೆಯಬೇಡಿ ಎಂದು ಗೋಗರೆಯುತ್ತಾ ಕಣ್ಣೀರು ಹಾಕಿದ ಅಶೋಕ್​ ಪೂಜಾರಿ ಅಭಿಮಾನಿಗಳು.

By

Published : Nov 21, 2019, 3:32 PM IST

ನಾಮಪತ್ರ ವಾಪಸ್​ ಪಡೆಯದಂತೆ ಒತ್ತಾಯ

ಬೆಳಗಾವಿ:ಕೈ ಮುಗಿತಿವಿ... ನಾಮಪತ್ರ ಮಾತ್ರ ಹಿಂಪಡೆಯಬೇಡಿ. ಹಾಗೇನಾದರೂ ಮಾಡಿದರೆ ವಿಷ ಕುಡಿತೀವಿ. ಆಗ ನಮ್ಮ ಹೆಣದ ಮೇಲೆ ದಾಟಿ ಹೋಗಿ ಎಂದು ಅಭಿಮಾನಿಗಳು ಬೇಡಿಕೊಂಡ ಪ್ರಸಂಗ ನಡೆಯಿತು.

ಹೀಗೆ ಗೋಗರೆಯುತ್ತಾ ಗೋಕಾಕ್​ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಕಾರ್ಯಕರ್ತರು ಪರಿಪರಿಯಾಗಿ ಬೇಡಿಕೊಂಡ ಘಟನೆ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಜ್ಞಾನ ಮಂದಿರದಲ್ಲಿ ನಡೆದಿದೆ.

ನಾಮಪತ್ರ ವಾಪಸ್​ ಪಡೆಯದಂತೆ ಕಾಲಿಗೆ ಬಿದ್ದ ಅಭಿಮಾನಿ

ನಗರದ ಎನ್ಎಸ್​​ಎಫ್ ಮೈದಾನದಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು, ಅಶೋಕ ಪೂಜಾರಿ ಮನವೊಲಿಕೆಯ ನಿರ್ಧಾರ ಕೈಗೊಂಡರು. ಬಿಜೆಪಿ ಹಿರಿಯ ನಾಯಕ ಉಮೇಶ್​ ಕತ್ತಿಗೆ ಪೂಜಾರಿ ಮನವೊಲಿಸುವ ಜವಾಬ್ದಾರಿ ವಹಿಸಲಾಗಿತ್ತು.‌ ಸಭೆ ಬಳಿಕ ಕತ್ತಿ ನೇರವಾಗಿ ಪೂಜಾರಿ ಮನೆಗೆ ಆಗಮಿಸಿದರು.

ಈ‌ ವಿಷಯ ತಿಳಿದ ಅಭಿಮಾನಿಗಳು ಅಶೋಕ್​ ಪೂಜಾರಿ ಅವರನ್ನು ಜ್ಞಾನ ಮಂದಿರದಲ್ಲಿ ಹಿಡಿದಿಟ್ಟುಕೊಂಡರು. ಅಲ್ಲದೆ, ಪೂಜಾರಿಗೆ ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ಕುತಂತ್ರಕ್ಕೆ ಬಲಿಯಾಗದಂತೆ ಕಣ್ಣೀರಿಟ್ಟರು. ಅಭಿಮಾನಿಗಳ ರೋದನೆ ಕಂಡು ಪೂಜಾರಿಯೂ ಕಣ್ಣೀರು ಹಾಕಿದರು.

ABOUT THE AUTHOR

...view details