ಕರ್ನಾಟಕ

karnataka

ETV Bharat / city

ಕೋವಿಡ್​​​​​ಗೆ ಬಲಿಯಾದ ಪತ್ರಕರ್ತನ ಕುಟುಂಬಕ್ಕೆ ಡಿಸಿಎಂ ಕಾರಜೋಳ ವೈಯಕ್ತಿಕ ನೆರವು - ಪತ್ರಕರ್ತ ಸಂಜೀವ್ ಕುಮಾರ್ ನಾಡಗೇರ

ಪತ್ರಕರ್ತರ ಮನವಿ ಮೇರೆಗೆ ಡಿಸಿಎಂ‌ ಗೋವಿಂದ ಕಾರಜೋಳ, ಇತ್ತೀಚೆಗೆ ಕೋವಿಡ್​​ನಿಂದ ಮೃತಪಟ್ಟ ಸಂಜೀವ ಕುಮಾರ್ ನಾಡಿಗೇರ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.

belagavi
ಕೋವಿಡ್​​​​​ಗೆ ಬಲಿಯಾದ ಪತ್ರಕರ್ತನ ಕುಟುಂಬಕ್ಕೆ ಡಿಸಿಎಂ ನೆರವು

By

Published : Jun 10, 2021, 1:05 PM IST

ಬೆಳಗಾವಿ: ಇತ್ತೀಚೆಗೆ ಕೊರೊನಾದಿಂದ ನಿಧನರಾದ ಪತ್ರಕರ್ತ ಸಂಜೀವ ಕುಮಾರ್ ನಾಡಿಗೇರ ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದರು. ಕಳೆದ ಇಪ್ಪತ್ತು ವರ್ಷಗಳಿಂದ ವಿವಿಧ ಖಾಸಗಿ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಸಂಜೀವ ಕುಮಾರ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ನಗರದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ, ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ಕೋವಿಡ್​​​​​ಗೆ ಬಲಿಯಾದ ಪತ್ರಕರ್ತನ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ ಗೋವಿಂದ ಕಾರಜೋಳ

ಇತ್ತ ಪತ್ರಕರ್ತ ಸಂಜೀವ​ ಸಾವಿಗೆ ಬಿಮ್ಸ್ ಆಸ್ಪತ್ರೆಯ ಆಡಳಿತ ‌ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದ್ದವು. ಇದಕ್ಕೆ ಜಿಲ್ಲೆಯ ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿದ್ದರು. ಪತ್ರಕರ್ತರ ಮನವಿ ಮೇರೆಗೆ ಡಿಸಿಎಂ‌ ಗೋವಿಂದ ಕಾರಜೋಳ, ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ದಿ. ಸಂಜೀವ​ ಕುಮಾರ್ ನಾಡಿಗೇರ ಅವರ ಪತ್ನಿ ಹಾಗೂ ಪುತ್ರರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.

ಇದೇ ವೇಳೆ ವಿಧವಾ ವೇತನ ಸೇರಿದಂತೆ ಇತರೆ ಸರ್ಕಾರದ ಯೋಜನೆಗಳನ್ನು ‌ತಲುಪಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಜಿ .ಹಿರೇಮಠ ಅವರಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕುಸಿದ ಕೋವಿಡ್‌ ಆರ್ಭಟ: ನಗರದತ್ತ ಧಾವಿಸುತ್ತಿರುವ ಜನರಿಂದ ಟ್ರಾಫಿಕ್ ಜಾಮ್


ABOUT THE AUTHOR

...view details