ಕರ್ನಾಟಕ

karnataka

ETV Bharat / city

ಶ್ರೀಕ್ಷೇತ್ರ ಸವದತ್ತಿಯಲ್ಲಿದ್ದ ಅಕ್ರಮ ಅಂಗಡಿಗಳ ತೆರವು.. ಆಡಳಿತ ಮಂಡಳಿ, ಪೊಲೀಸರ ವಿರುದ್ಧ ವ್ಯಾಪಾರಸ್ಥರ ಕಿಡಿ - ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ

ಈ ಮಧ್ಯೆ ಏಕಾಏಕಿ ಅಂಗಡಿ ತೆರವು ಮಾಡಿ ಸಾಮಗ್ರಿ ನಾಶಪಡಿಸಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ, ಸವದತ್ತಿ ಪೊಲೀಸರ ವಿರುದ್ಧ ವ್ಯಾಪಾರಸ್ಥರು ತೀವ್ರ ಆಕ್ರೋಶ ಹೊರ ಹಾಕಿದರು..

clearance-of-illegal-shops-in-savadatti-temple
ಸವದತ್ತಿಯಲ್ಲಿ ಅಕ್ರಮ ಅಂಗಡಿಗಳ ತೆರವು

By

Published : Dec 19, 2020, 1:34 PM IST

ಬೆಳಗಾವಿ :ಜಿಲ್ಲೆಯ ಶ್ರೀಕ್ಷೇತ್ರ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿನ ಅಕ್ರಮ ಅಂಗಡಿಗಳ ತೆರವಿಗೆ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸವದತ್ತಿಯಲ್ಲಿರುವ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ..

ನೋಟಿಸ್ ನೀಡದೇ ಏಕಾಏಕಿ ಅಂಗಡಿಗಳ ತೆರವು ಏಕೆ ಮಾಡುತ್ತಿದ್ದೀರಿ.. ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿ, ಕುಂಕುಮ, ಭಂಡಾರ ಮಣ್ಣು ಪಾಲಾಗಿವೆ. ಅಂಗಡಿಯಲ್ಲಿ ಸಾಮಗ್ರಿಗಳನ್ನು ತೆಗೆದುಕೊಳ್ಳತ್ತೇವೆ ಎಂದ್ರೂ ಕೇಳದೆ, ಏಕಾಏಕಿ ತೆರವು ಮಾಡಿದ್ದಾರೆ. ಕೊರೊನಾ ಕಾರಣದಿಂದ ಕಳೆದ 9 ತಿಂಗಳಿಂದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಬಂದ್ ಆಗಿದ್ದು, ವ್ಯಾಪಾರವೂ ಇರಲಿಲ್ಲ.

ಓದಿ:ಈಗಿನ ಕಾಂಗ್ರೆಸ್​ಗೂ ಹಿಂದಿನ ಕಾಂಗ್ರೆಸ್​ಗೂ ಸಂಬಂಧವಿಲ್ಲ : ಸಿ ಟಿ ರವಿ

ಈ ಮಧ್ಯೆ ಏಕಾಏಕಿ ಅಂಗಡಿ ತೆರವು ಮಾಡಿ ಸಾಮಗ್ರಿ ನಾಶಪಡಿಸಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ, ಸವದತ್ತಿ ಪೊಲೀಸರ ವಿರುದ್ಧ ವ್ಯಾಪಾರಸ್ಥರು ತೀವ್ರ ಆಕ್ರೋಶ ಹೊರ ಹಾಕಿದರು.

ABOUT THE AUTHOR

...view details