ಕರ್ನಾಟಕ

karnataka

ETV Bharat / city

ಬಿಜೆಪಿ ಹಣದ ಹೊಳೆ ಹರಿಸುತ್ತಿದೆ: ಕೈ ಅಭ್ಯರ್ಥಿ ಸುನೀಲ್ ಸಂಕ - ವಾಯುವ್ಯ ಮತಕ್ಷೇತ್ರ ಚುಣಾವಣೆ

ಬಿಜೆಪಿ ಮತದಾರರನ್ನು ತನ್ನತ್ತ ಸೆಳೆಯಲು ಹಣ ಹಂಚಿಕೆ ಮಾಡುತ್ತಿದೆ. ಇದೇನು ಹೊಸದಲ್ಲ. ನಾವು ಯಾವುದೇ ಹಣ ಹಂಚಿಕೆ ಮಾಡಿಲ್ಲ. ಹಂಚಲು ನಮ್ಮ ಬಳಿ ಹಣವೂ ಇಲ್ಲ ಎಂದು ಸುನೀಲ್​ ಸಂಕ ಹೇಳಿದ್ದಾರೆ.

Congress Candidate Sunil Sanka
ಕೈ ಅಭ್ಯರ್ಥಿ ಸುನೀಲ್ ಸಂಕ

By

Published : Jun 13, 2022, 12:47 PM IST

ಅಥಣಿ:ವಾಯವ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ ಆರಂಭವಾಗಿದ್ದು, ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ಅವರು ಅಥಣಿ ಪಟ್ಟಣದ 4 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ವಾಯವ್ಯ ಮತಕ್ಷೇತ್ರ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳಾದ ನಾನು ಹಾಗೂ ಪ್ರಕಾಶ್​ ಹುಕ್ಕೇರಿ ಜಯಭೇರಿ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಮತದಾರರನ್ನು ಸೆಳೆಯಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಣದಿಂದ ಬಂದಿರುವುದು. ಈ ಚುನಾವಣೆಯಲ್ಲಿ ಅವರು ಹಣ ಹಂಚಿಕೆ ಮಾಡುವುದು ಹೊಸದಲ್ಲ ಎಂದು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಕೈ ಅಭ್ಯರ್ಥಿ ಸುನೀಲ್ ಸಂಕ ಸುದ್ದಿಗಾಗರೊಂದಿಗೆ ಮಾತನಾಡಿದರು.

ಪ್ರಕಾಶ್ ಹುಕ್ಕೇರಿಯವರಾಗಲಿ ನಾವಾಗಲಿ ಮತದಾರರಿಗೆ ಯಾವುದೇ ಹಣ ಹಂಚಿಕೆ ಮಾಡಿಲ್ಲ. ನಮ್ಮ ಹತ್ತಿರ ಹಂಚಿಕೆ ಮಾಡಲು ಹಣವೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:ಶಿಕ್ಷಕರ ಕ್ಷೇತ್ರದಲ್ಲಿ ಮತದಾನ ಚುರುಕು: ಮಂದಗತಿಯಲ್ಲಿ ಸಾಗುತ್ತಿರುವ ಪದವೀಧರರ ಕ್ಷೇತ್ರದ ಮತದಾನ

ABOUT THE AUTHOR

...view details