ಕರ್ನಾಟಕ

karnataka

ETV Bharat / city

ಸಂಕೇಶ್ವರದಲ್ಲಿ ಒಂದೇ ಬೈಕ್ ಮೇಲೆ ನಾಲ್ವರ ಸವಾರಿ: ನಿಯಂತ್ರಣ ತಪ್ಪಿ ಬಿದ್ದು ನಾಲ್ವರೂ ಸಾವು - ಬೆಳಗಾವಿಯಲ್ಲಿ ಬೈಕ್ ಅಪಘಾತದಲ್ಲಿ 4 ಸಾವು

ಒಂದೇ ಬೈಕ್ ಮೇಲೆ ಹೋಗುತ್ತಿದ್ದ ನಾಲ್ವರು ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಸಂಕೇಶ್ವರದ ಅನಂತ ವಿದ್ಯಾನಗರದ ನಿವಾಸಿಗಳಾಗಿದ್ದಾರೆ.

ಒಂದೇ ಬೈಕ್ ಮೇಲೆ ನಾಲ್ವರ ಸವಾರಿ
ಒಂದೇ ಬೈಕ್ ಮೇಲೆ ನಾಲ್ವರ ಸವಾರಿ

By

Published : Feb 25, 2022, 11:53 AM IST

ಚಿಕ್ಕೋಡಿ: ಒಂದೇ ಬೈಕ್​ನಲ್ಲಿ ಸವಾರಿ ಮಾಡುತ್ತಿದ್ದ ನಾಲ್ವರು ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ ನಾಲ್ವರೂ ಸಾವನ್ನಪ್ಪಿದ ಘಟನೆ ಸಂಕೇಶ್ವರದಲ್ಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ‌.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಬಸವರಾಜ್ ಮಾಳಿ(26), ಪ್ರವೀಣ ಸಣದಿ(29), ಮಹಿಬೂಬ್ ಶೇಗಡಿ (21) ಮೃತ ವ್ಯಕ್ತಿಗಳು. ಸಂಕೇಶ್ವರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಈ ನಡೆದ ಘಟನೆ ನಡೆದಿದೆ.

ತಡರಾತ್ರಿ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. ಗಂಭೀರ ಪ್ರಮಾಣದ ಗಾಯಗೊಂಡ ವ್ಯಕ್ತಿಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆತನೂ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ನಾಲ್ವರು ಮದ್ಯ ಸೇವಿಸಿ ಒಂದೇ ಬೈಕ್ ಮೇಲೆ ಸವಾರಿ ಮಾಡುತ್ತಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೃತರೆಲ್ಲರೂ ಸಂಕೇಶ್ವರದ ಅನಂತ ವಿದ್ಯಾನಗರದ ನಿವಾಸಿಗಳಾಗಿದ್ದು, ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಕ್ರೇನ್: ಹಾಸ್ಟೆಲ್‌ ನೆಲಮಹಡಿ, ಬಂಕರ್​ಗಳಲ್ಲಿ ರಕ್ಷಣೆ ಪಡೆದ ಬೆಳಗಾವಿಯ 7 ವಿದ್ಯಾರ್ಥಿಗಳು

ABOUT THE AUTHOR

...view details