ಕರ್ನಾಟಕ

karnataka

ETV Bharat / business

Raksha bandhan: ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಯರಿಗೆ ನೀಡಬಹುದಾದ ಅದ್ಭುತ ಉಡುಗೊರೆಗಳು ಇಲ್ಲಿವೆ ನೋಡಿ - ಈಟಿವಿ ಭಾರತ ಕನ್ನಡ

ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಯರಿಗೆ ನೀಡಬಹುದಾದ ಉಡುಗೊರೆಗಳು ಈ ಕೆಳಗಿವೆ.

ರಕ್ಷಾ ಬಂಧನ ಉಡುಗೊರೆಗಳು
ರಕ್ಷಾ ಬಂಧನ ಉಡುಗೊರೆಗಳು

By ETV Bharat Karnataka Team

Published : Aug 29, 2023, 6:32 PM IST

ಸಹೋದರ ಮತ್ತು ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವೇ ರಕ್ಷಾಬಂಧನ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಪವಿತ್ರವಾದ ರಾಖಿಗಳನ್ನು ಕಟ್ಟುತ್ತಾರೆ. ಪ್ರತಿಯಾಗಿ ಸಹೋದರರು ಉಡುಗೊರೆಯಾಗಿ ಸ್ಮಾರ್ಟ್​ಫೋನ್​, ಹಣ, ಹೊಸ ಉಡುಪುಗಳು, ಸೌಂದರ್ಯವರ್ಧಕಗಳನ್ನು ನೀಡುವುದು ಸಾಮಾನ್ಯ. ಆದರೇ ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಯರಿಗೆ ಭವಿಷ್ಯಕ್ಕೆ ಸಹಾಯಕವಾಗುವ ಹಣಕಾಸಿನ ಉಡಗೊರೆಗಳನ್ನು ನೀಡಿ. ಅಂತಹ ಅದ್ಭುತ ಉಡುಗೊರೆಗಳು ಇಲ್ಲಿವೆ ನೋಡಿ.

ವ್ಯವಸ್ಥಿತ ಹೂಡಿಕೆ ಯೋಜನೆ (SIP): ಮ್ಯೂಚುವಲ್ ಫಂಡ್‌ಗಳಲ್ಲಿ ನಿಯಮಿತ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಹಣಕಾಸು ನಿಧಿ ಅನ್ನು ಸೃಷ್ಟಿಸುತ್ತದೆ. ಇದು ನಿಮ್ಮ ಸಹೋದರಿಯ ಆರ್ಥಿಕ ಭವಿಷ್ಯಕ್ಕೆ ಹೆಚ್ಚು ಸಹಾಯಕವಾಗಿರಲಿದೆ. ಆದ್ದರಿಂದ ನಿಮ್ಮ ಸಹೋದರಿಯ ಹೆಸರಿನಲ್ಲಿ ಈಗಿನಿಂದ ಮ್ಯೂಚುವಲ್​ ಫಂಡ್​ನಲ್ಲಿ ಹೂಡಿಕೆ ಮಾಡಲು ಆರಂಭಿಸಿ.

ಆರೋಗ್ಯ ವಿಮಾ ಪಾಲಿಸಿ:ಪ್ರಸ್ತುತ ಆಧುನಿಕ ಯುಗದಲ್ಲಿ ಆರೋಗ್ಯ ಮತ್ತು ಜೀವ ವಿಮೆಗಳು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಅದಕ್ಕಾಗಿಯೇ ಈ ರಕ್ಷಾ ಬಂಧನದಂದು ನಿಮ್ಮ ಸಹೋದರಿಯ ಹೆಸರಲ್ಲಿ ಆರೋಗ್ಯ ವಿಮೆಯನ್ನು ಈಗಲೇ ಮಾಡಿಸಿ.

ಬ್ಯಾಂಕ್​ ಉಳಿತಾಯ ಖಾತೆ:ನಿಮ್ಮ ಸಹೋದರಿಯರ ಸುವರ್ಣ ಭವಿಷ್ಯಕ್ಕಾಗಿ ಉಳಿತಾಯ ಮತ್ತು ಹೂಡಿಕೆ ಅತ್ಯಗತ್ಯವಾಗಿದೆ. ಹಾಗಾಗಿ ಹಬ್ಬದ ಉಡುಗೊರೆಯಾಗಿ ನಿಮ್ಮ ಸಹೋದರಿಯರ ಹೆಸರಿನಲ್ಲಿ ಬ್ಯಾಂಕ್ ಉಳಿತಾಯ ಖಾತೆ ಅಥವಾ ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ತೆರೆಯುವುದು ಉತ್ತಮ.

ಡಿಮ್ಯಾಟ್ ಖಾತೆ:ಪ್ರಸ್ತುತ ದಿನಗಳಲ್ಲಿ ಹಣದುಬ್ಬರ ಹೆಚ್ಚುತ್ತಲೇ ಇದ್ದು, ಇದರೊಂದಿಗೆ ನಮ್ಮ ಆದಾಯವೂ ಹೆಚ್ಚಾಗಬೇಕು. ಇದಕ್ಕಾಗಿ ಕೇವಲ ಉಳಿತಾಯ ಒಂದಿದ್ದರೆ ಸಾಕಾಗಲ್ಲ. ಆದ್ದರಿಂದ ನಿಮ್ಮ ಸಹೋದರಿಯರ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿ. ಹಾಗೆ ಹಣಕಾಸು ತಜ್ಞರ ಸಲಹೆ ಪಡೆದು ಗುಣಮಟ್ಟದ ಷೇರುಗಳಲ್ಲಿ ಹೂಡಿಕೆ ಮಾಡಲು ಅವರನ್ನು ಪ್ರೋತ್ಸಾಹಿಸಿ. ಇದು ಅವರ ಉತ್ತಮ ಭವಿಷ್ಯಕ್ಕೆ ಬುನಾದಿಯಾಗಲಿದೆ.

ಡಿಜಿಟಲ್ ಚಿನ್ನ: ರಾಖಿಯ ಸಂದರ್ಭದಲ್ಲಿ, ಸಹೋದರರು ತಮ್ಮ ಸಹೋದರಿಯರಿಗೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ನಿಜ ಚಿನ್ನದ ಬದಲು ಡಿಜಿಟಲ್ ಚಿನ್ನವನ್ನ ಉಡುಗೊರೆಯಾಗಿ ನೀಡಿ.

ಗೋಲ್ಡ್ ಇಟಿಎಫ್‌:ಸಹೋದರರು ತಮ್ಮ ಸಹೋದರಿಯರ ಹೆಸರಿನಲ್ಲಿ ಇಟಿಎಫ್‌ಗಳು ಅಥವಾ ಚಿನ್ನದ ಉಳಿತಾಯ ಖಾತೆಗಳ ಮೂಲಕ ಗೋಲ್ಡ್​ ಇಟಿಎಫ್​ನಲ್ಲಿ ಹೂಡಿಕೆ ಮಾಡಬಹುದು. ಉಳಿದಂತೆ ನಿವೇಶನ ಅಥವಾ ಜಮೀನುಗಳಂತಹ ಉಡುಗುರೆ ನೀಡುವುದರಿಂದ ಅವರ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಲಿದೆ.

ಇದನ್ನೂ ಓದಿ:ನಿವೃತ್ತಿಯ ನಂತರ 20 ಸಾವಿರ ಮಾಸಿಕ ಪಿಂಚಣಿ ಪಡೆಯುವುದು ಹೇಗೆ?.. ಇಲ್ಲಿವೆ ಕೆಲ ಉತ್ತಮ ಮಾರ್ಗಗಳು..!

ABOUT THE AUTHOR

...view details