ನವದೆಹಲಿ:ಮಳೆ ಕೊರತೆ ಮತ್ತು ಭತ್ತದ ಬಿತ್ತನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅಕ್ಕಿ, ಬೇಳೆಕಾಳುಗಳ ಬೆಲೆ ದುಬಾರಿಯಾಗಲಿದೆ. ಗ್ರಾಹಕ ಸೂಚ್ಯಂಕ ದರದಲ್ಲಿ ಅಕ್ಕಿ ಶೇ 4.4 ಮತ್ತು ಬೇಳೆಕಾಳುಗಳು ಶೇ 6 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮೋತಿಲಾಲ್ ಒಸ್ವಾಲ್ ಫೈನಾನ್ಸ್ ವರದಿ ತಿಳಿಸಿದೆ.
ಮಾನ್ಸೂನ್ ಕೊರತೆ ಹಲವು ರಾಜ್ಯಗಳಲ್ಲಿ ಅಕ್ಕಿ ಇಳುವರಿ ತಗ್ಗಿಸಿದೆ. ಉತ್ತರ ಪ್ರದೇಶದಲ್ಲಿ ಮಳೆ ಸಾಮಾನ್ಯಕ್ಕಿಂತ ಶೇ 14ರಷ್ಟು ಕಡಿಮೆಯಾದರೆ, ಕರ್ನಾಟಕದಲ್ಲಿ ಶೇ 10ರಷ್ಟು, ಆಂಧ್ರಪ್ರದೇಶದಲ್ಲಿ ಶೇ 9ರಷ್ಟು, ಜಾರ್ಖಂಡ್ನಲ್ಲಿ ಶೇ 37ರಷ್ಟು ಕುಂಠಿತವಾಗಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಅಧಿಕ ಮಳೆಯಿಂದಾಗಿ ಕ್ರಮವಾಗಿ ಶೇ 38 ಮತ್ತು ಶೇ 39ರಷ್ಟು ಬಿತ್ತನೆ ಕಡಿಮೆಯಾಗಿದೆ. ಕಡಿಮೆ ನೀರಾವರಿ ಪ್ರಮುಖ ರಾಜ್ಯಗಳಲ್ಲಿ ಬೇಳೆಕಾಳು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಬೆಳೆಗಳ ಏರಿಳಿತವೂ ಕಳೆದ ಐದು ತಿಂಗಳಿನಿಂದ ದ್ವಿಗುಣಗೊಂಡಿದೆ ಎಂದು ವರದಿ ಹೇಳುತ್ತಿದೆ.
ಎಲ್ಲೆಲ್ಲಿ ಮಳೆ ಕುಂಠಿತ?:ಖಾರಿಫ್ ಬಿತ್ತನೆಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 0.8ರಷ್ಟು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಭತ್ತದ ಕೃಷಿ ಶೇ 4.9ರಷ್ಟು ಹೆಚ್ಚಿದೆ. ಆದಾಗ್ಯೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಬೇಳೆಕಾಳು ಶೇ 7.9ರಷ್ಟು ಕಡಿಮೆ ಇದೆ. ಸೆಣಬು, ಹತ್ತಿ ಮತ್ತು ಎಣ್ಣೆಕಾಳುಗಳ ಉತ್ಪಾದನೆಯೂ ಕಡಿಮೆಯಾಗಿದೆ. ಒರಟು ಧಾನ್ಯಗಳು ಮತ್ತು ಕಬ್ಬಿನ ಬಿತ್ತನೆ ಸಾಮಾನ್ಯದಂತೆ ಮುಂದುವರೆದಿದೆ.