ಕರ್ನಾಟಕ

karnataka

By

Published : Mar 26, 2021, 3:23 PM IST

ETV Bharat / business

ಇದಪ್ಪಾ ಪ್ರಾಮಾಣಿಕತೆ.. ಗ್ರಾಹಕ ಗೆದ್ದ 6 ಕೋಟಿ ರೂ. ಲಾಟರಿ ಟಿಕೆಟ್​ ಹಸ್ತಾಂತರ!

ಸ್ಮೀಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ ಟಿಕೆಟ್​ನ್ನು ಚಂದ್ರನ್​ ಎಂಬವರಿಗೆ ಮಾರಾಟ ಮಾಡಿದ್ದರು. ಕೊರೊನಾ ಕಾಲದಲ್ಲಿ ಜನರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಈ ಸಮಯದಲ್ಲಿ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸ್ಮೀಜಾ ಅವರು ವಿಜೇತ ಟಿಕೆಟ್ ಅನ್ನು ಗ್ರಾಹಕ ಚಂದ್ರನ್ ಅವರಿಗೆ ನೀಡಿದ್ದಾರೆ.

Lottery seller
Lottery seller

ಕೊಚ್ಚಿ:ಕೇರಳದ ಲಾಟರಿ ಮಾರಾಟಗಾರ್ತಿಯೊಬ್ಬರು ಗ್ರಾಹಕರಿಗೆ ಮಾರಾಟ ಮಾಡಿದ್ದರೂ, ತನ್ನಲ್ಲಿ ಉಳಿದಿದ್ದ ಟಿಕೆಟ್​​ಗೆ 6 ಕೋಟಿ ರೂ. ಮೌಲ್ಯದ ಬಹುಮಾನ ಬಂದಿತ್ತು. ಆದರೆ ಅವರು ಲಾಟರಿ ಟಿಕೆಟ್​ ಅನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗೆ ನೀಡಿದ್ದು ಭಾರೀ ಮೆಚ್ಚುಗೆ ಸಂಪಾದಿಸಿದ್ದಾರೆ.

ಸ್ಮೀಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ ಟಿಕೆಟ್​ನ್ನು ಚಂದ್ರನ್​ ಎಂಬುವರಿಗೆ ಮಾರಾಟ ಮಾಡಿದ್ದರು. ಕೊರೊನಾ ಕಾಲದಲ್ಲಿ ಜನರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಈ ಸಮಯದಲ್ಲಿ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸ್ಮೀಜಾ ಅವರು ವಿಜೇತ ಟಿಕೆಟ್ ಅನ್ನು ಗ್ರಾಹಕ ಚಂದ್ರನ್ ಅವರಿಗೆ ನೀಡಿದ್ದಾರೆ.

ಇದನ್ನೂ ಓದಿ: ಮಿಸ್ತ್ರಿ ವಜಾ ಸರಿ- ಸುಪ್ರೀಂ: 'ಇದು ಗೆಲುವು ಅಥವಾ ಸೋಲಿನ ವಿಷಯವಲ್ಲ'- ಕೋರ್ಟ್​ಗೆ ರತನ್​ ಕೃತಜ್ಞತೆ

37 ವರ್ಷದ ಸ್ಮೀಜಾ ಅವರ ಬಳಿ ಸುಮಾರು 12 ಮಾರಾಟವಾಗದ ಬಂಪರ್ ಟಿಕೆಟ್‌ಗಳು ಉಳಿದಿದ್ದವು. ಲಾಟರಿ ಟಿಕೆಟ್ ಖರೀದಿದಾರರ ವಾಟ್ಸಾಪ್ ಗ್ರೂಪ್​ನಲ್ಲಿ ಟಿಕೆಟ್ ಬಗ್ಗೆ ಪೋಸ್ಟ್ ಮಾಡಿದ್ದರು. ಆ 12 ಟಿಕೆಟ್​ಗಳನ್ನು ಖರೀದಿಸಲು ಯಾರೂ ಸಿದ್ಧರಿರಲಿಲ್ಲ. ಸ್ಮಿಜಾ ಅವರು ಚಂದ್ರನ್ ಚೆಟ್ಟನ್ ಅವರನ್ನು ಸಂಪರ್ಕಿಸಿದ್ದಾರೆ. ಆ ನಂತರ ಆತ ಟಿಕೆಟ್​ಗಳ ಫೋಟೋ ಕಳುಹಿಸಲು ಕೇಳಿದ. ಆ ಬಳಿಕ ಲಾಟರಿ ಆಯ್ಕೆಯ ಸಂಖ್ಯೆಗಳನ್ನೂ ಕೇಳಿದ.

ವಿಜೇತನಿಗೆ ಪ್ರಾಮಾಣಿಕವಾಗಿ ಲಾಟರಿ ಟಿಕೆಟ್​ ಹಸ್ತಾಂತರಿಸಿದ ವರ್ತಕಿ

ವಿಜೇತ ಸಂಖ್ಯೆಗಳ ಬಗ್ಗೆ ತಿಳಿಯುತ್ತಿದ್ದಂತೆ ಸ್ಮೀಜಾ ಅವರು ಜಾಕ್‌ಪಾಟ್ ಟಿಕೆಟ್‌ನ್ನು ಅದರ ಮಾಲೀಕರಿಗೆ ಆದಷ್ಟು ಬೇಗ ಹಸ್ತಾಂತರಿಸಲು ನಿರ್ಧರಿಸಿ ಆತನಿಗೆ ನೀಡಿದ್ದಾರೆ. 'ಟಿಕೆಟ್‌ಗಳನ್ನು ಗ್ರಾಹಕರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಖರೀದಿಸುತ್ತಾರೆ. ವ್ಯವಹಾರದಲ್ಲಿ ಗ್ರಾಹಕರಿಗೆ ಟಿಕೆಟ್​ ನೀಡುವುದು ಪ್ರಾಮಾಣಿಕವಾದದ್ದು' ಎನ್ನುತ್ತಾರೆ ವರ್ತಕಿ ಸ್ಮೀಜಾ.

ABOUT THE AUTHOR

...view details