ಕರ್ನಾಟಕ

karnataka

ಅಂತಾರಾಷ್ಟ್ರೀಯ ಸುಂಕ ದಿನ.. ಭಾರತದ ಕಸ್ಟಮ್ಸ್​ ಕಾರ್ಯವೈಖರಿ ಸುಲಭ ವ್ಯಾಪಾರದತ್ತ- ಸೀತಾರಾಮನ್

By

Published : Jan 27, 2021, 5:42 PM IST

ವಿಶ್ವ ಕಸ್ಟಮ್ಸ್ ಸಂಸ್ಥೆಯು ಈ ವರ್ಷವನ್ನು ಸ್ಥಿರವಾದ ಪೂರೈಕೆ ಸರಪಳಿಗೆ ಚೇತರಿಕೆ, ನವೀಕರಣ ಮತ್ತು ಸ್ಥಿತಿಸ್ಥಾಪಕತ್ವ ಹೆಚ್ಚಿಸುವ ಕಸ್ಟಮ್ಸ್ ಎಂಬ ಆಶಯದಡಿ ಆಯ್ಕೆ ಮಾಡಿದೆ. ನಮ್ಮ ಬೆಳವಣಿಗೆಗೆ ಸುರಕ್ಷಿತವಾದ ಪೂರೈಕೆ ಸರಪಳಿ ಅತ್ಯಗತ್ಯ. ಅದನ್ನು ಖಚಿತಪಡಿಲು ಭಾರತೀಯ ಕಸ್ಟಮ್ಸ್ ಮುಂದೆ ನಿಂತು ಶ್ರಮಿಸುತ್ತಿದೆ..

FM
FM

ನವದೆಹಲಿ :ಭಾರತೀಯ ಕಸ್ಟಮ್ಸ್​ ಕಾರ್ಯವೈಖರಿಯ ಕೆಲಸವೆಲ್ಲ ವ್ಯಾಪಾರದ ಸುಲಲತೆ ಮತ್ತು ವ್ಯಾಪಾರಕ್ಕೆ ಬೇಕಾದ ಸೌಲಭ್ಯಗಳನ್ನು ಸುಲಭಗೊಳಿಸುವತ್ತ ಬದಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯ ವೇಳೆ ತಮ್ಮ ಸಂದೇಶ ನೀಡಿದ ಸೀತಾರಾಮನ್​ ಅವರು, ಕಸ್ಟಮ್ಸ್ ಅಧಿಕಾರಿಗಳು ಜನರು ಕೇಂದ್ರಿತ ವಿಧಾನ ಅಳವಡಿಸಿಕೊಳ್ಳುತ್ತಿದ್ದು, ಇಲಾಖೆಯ ಕಾರ್ಯಚಟುವಟಿಕೆಯ ಪರಿವರ್ತನೆಯ ಚಟುವಟಿಕೆಗಳು ಮತ್ತಷ್ಟು ವೃದ್ಧಿಸುತ್ತಿವೆ ಎಂದರು.

ಭಾರತೀಯ ಕಸ್ಟಮ್ಸ್ ಕೆಲಸದ ಮಾದರಿ ಬದಲಾವಣೆಯಾಗಿದೆ. ವ್ಯಾಪಾರ ಮತ್ತು ವ್ಯಾಪಾರ ಸೌಲಭ್ಯ ಸುಲಭಗೊಳಿಸುವತ್ತ ಗಮನ ಹರಿಸಲಾಗಿದೆ. ಜನರ ಕೇಂದ್ರಿತ ವಿಧಾನ ಅಳವಡಿಸಿಕೊಳ್ಳುವುದು ಕಸ್ಟಮ್ಸ್ ಕಾರ್ಯನಿರ್ವಹಣೆಯ ಪರಿವರ್ತಕ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: 256 ರೂ. ತಗ್ಗಿದ ಕೆಜಿ ಬೆಳ್ಳಿ ದರ : ಇಂದಿನ ಗೋಲ್ಡ್​ ರೇಟ್ ಹೀಗಿದೆ..

ವಿಶ್ವ ಕಸ್ಟಮ್ಸ್ ಸಂಸ್ಥೆಯು ಈ ವರ್ಷವನ್ನು ಸ್ಥಿರವಾದ ಪೂರೈಕೆ ಸರಪಳಿಗೆ ಚೇತರಿಕೆ, ನವೀಕರಣ ಮತ್ತು ಸ್ಥಿತಿಸ್ಥಾಪಕತ್ವ ಹೆಚ್ಚಿಸುವ ಕಸ್ಟಮ್ಸ್ ಎಂಬ ಆಶಯದಡಿ ಆಯ್ಕೆ ಮಾಡಿದೆ. ನಮ್ಮ ಬೆಳವಣಿಗೆಗೆ ಸುರಕ್ಷಿತವಾದ ಪೂರೈಕೆ ಸರಪಳಿ ಅತ್ಯಗತ್ಯ. ಅದನ್ನು ಖಚಿತಪಡಿಲು ಭಾರತೀಯ ಕಸ್ಟಮ್ಸ್ ಮುಂದೆ ನಿಂತು ಶ್ರಮಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು.

ನಾವು ಸಾಂಕ್ರಾಮಿಕ ರೋಗದಿಂದ ಹೊರ ಬರುತ್ತಿದ್ದಂತೆ ನಮ್ಮ ಗಡಿಗಳನ್ನು ಕಾಪಾಡುವಲ್ಲಿ ಕಸ್ಟಮ್ಸ್ ಪಾತ್ರವು ಮತ್ತಷ್ಟು ಮಹತ್ವದ್ದಾಗಿದೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.

ABOUT THE AUTHOR

...view details