ಕರ್ನಾಟಕ

karnataka

ETV Bharat / business

ವಿವಾದ್​ ಸೆ ವಿಶ್ವಾಸ್​: ತೆರಿಗೆ ಪಾವತಿ ಘೋಷಣೆ ಗಡುವು ಮತ್ತೆ 3 ತಿಂಗಳು ಮುಂದೂಡಿಕೆ!

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುವರಿ ಮೊತ್ತ ಪಾವತಿಸದೆ, ಘೋಷಣೆಯ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ ಅಂತ್ಯದವರೆಗೆ ಸರ್ಕಾರ ವಿಸ್ತರಿಸಿತು. ದಿನಾಂಕವನ್ನು ಮತ್ತೆ ಡಿಸೆಂಬರ್ ಅಂತ್ಯಕ್ಕೆ ವಿಸ್ತರಿಸಲಾಯಿತು. ಅದನ್ನು ಈಗ ಮೂರು ತಿಂಗಳವರೆಗೆ 2021ರ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ.

By

Published : Oct 28, 2020, 4:01 PM IST

Vivad Se Vishwas
ವಿವಾದ್​ ಸೆ ವಿಶ್ವಾಸ್

ನವದೆಹಲಿ:ಮುಂದಿನ ವರ್ಷ ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಹೆಚ್ಚುವರಿ ಮೊತ್ತವನ್ನು ಮೂರು ತಿಂಗಳು ಪಾವತಿಸದೆ 'ವಿವಾದ್​​ ಸೆ ವಿಶ್ವಾಸ್​' ನೇರ ತೆರಿಗೆ ವ್ಯಾಜ್ಯ ಪರಿಹಾರ ಯೋಜನೆಯಡಿ ಪಾವತಿಗೆ ಹಣಕಾಸು ಸಚಿವಾಲಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

ನೇರ ತೆರಿಗೆ ವಿವಾದದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ 'ವಿವಾದ್ ಸೆ ವಿಶ್ವಾಸ್​ ಮಸೂದೆ-2020' ಅನ್ನು ಜಾರಿಗೆ ತರಲಾಯಿತು.

ಈ ಯೋಜನೆಯಡಿ ಡಿಸೆಂಬರ್ 31 ಅನ್ನು ಘೋಷಿತ ಕೊನೆಯ ದಿನಾಂಕ ಎಂದು ಸರ್ಕಾರ ಸೂಚಿಸಿದೆ. ತೆರಿಗೆ ಪಾವತಿದಾರನು ಈ ಗಡುವಿನ ತನಕ ತೆರಿಗೆದಾರರು ತಮ್ಮ ಪಾವತಿಯನ್ನು ಘೋಷಣೆ ಮಾಡಬೇಕಾಗಿರುತ್ತದೆ. ಈ ಘೋಷಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮೊತ್ತವಿಲ್ಲದೆ ತೆರಿಗೆದಾರನಿಗೆ 2020ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿದೆ.

ವಿವಿಧ ವೇದಿಕೆಗಳಲ್ಲಿ ತೆರಿಗೆ ವಿವಾದಗಳ ದಾವೆ ಮತ್ತು ಬಾಕಿ ವಿಚಾರಣೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್‌ನಲ್ಲಿ ಮಾರ್ಚ್ 31ರಂದು ಘೋಷಣೆ ಮಾಡುವ ಕೊನೆಯ ದಿನಾಂಕವೆಂದು ಘೋಷಿಸಿದ್ದರು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುವರಿ ಮೊತ್ತ ಪಾವತಿಸದೆ, ರಿಟರ್ನ್ಸ್ಸ್​ನ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ ಅಂತ್ಯದವರೆಗೆ ಸರ್ಕಾರ ವಿಸ್ತರಿಸಿತು. ದಿನಾಂಕವನ್ನು ಮತ್ತೆ ಡಿಸೆಂಬರ್ ಅಂತ್ಯಕ್ಕೆ ವಿಸ್ತರಿಸಲಾಯಿತು. ಅದನ್ನು ಈಗ ಮೂರು ತಿಂಗಳವರೆಗೆ 2021ರ ಮಾರ್ಚ್ 31ವರೆಗೆ ವಿಸ್ತರಿಸಲಾಗಿದೆ.

ABOUT THE AUTHOR

...view details