ಕರ್ನಾಟಕ

karnataka

By

Published : Sep 30, 2019, 7:01 AM IST

Updated : Sep 30, 2019, 7:18 AM IST

ETV Bharat / business

ನಿಮ್ಮ ವಾಹನ ಖರೀದಿಸಿ 15 ವರ್ಷ ಆಗಿದ್ಯಾ..? ಇಲ್ಲಿದೆ ಶಾಂಕಿಂಗ್​ ನ್ಯೂಸ್​

ಇತ್ತೀಚೆಗೆ ವಾಹನಗಳ ಹೊಗೆ ಹೊರಸೂಸುವಿಕೆಗೆ ಸಂಬಂಧ ಹೊಸ ಮಾನದಂಡಗಳು ಜಾರಿಗೆ ಬಂದಿವೆ. ಇದಕ್ಕೆ ಅನುಗುಣವಾಗಿ ಹಳೆಯ ವಾಹನಗಳು ಹೊಂದಿಕೊಳ್ಳುವುದಿಲ್ಲ. ಹೀಗಾಗಿ, ಹಳೆಯ ವಾಹನಗಳ ನೋಂದಣಿ, ಸಾರಿಗೆ ಅರ್ಹತೆಯ ಶುಲ್ಕ ಏರಿಸುವಂತಹ ಅಂಶಗಳನ್ನು ಒಳಗೊಂಡ ಹಳೆಯ ವಾಹನ ತಡೆ ನೀತಿಯ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಹೆಚ್ಚಿನ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಳೆಯ ವಾಹನಗಳು ಹೊರಸೂಸುವ ಹೊಗೆಯನ್ನು ತಡೆಯಲು ಮತ್ತು ಜನರ ಬಳಕೆಯ ಉತ್ತೇಜನ ತಗ್ಗಿಸಲು ಹಳೆಯ ವಾಹನ ತಡೆ ನೀತಿಯ ಒಪ್ಪಿಗೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಕರಡು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

15 ವರ್ಷಗಳ ಹಳೆಯ ವಾಹನಗಳು ಈಗಿನ ವಾಹನಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಹೊರಸೂಸುತ್ತವೆ. ಇವುಗಳು ವಾತಾವರಣದ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಜೊತೆಗೆ ರಸ್ತೆಯ ಅಪಘಾತಕ್ಕೂ ಕಾರಣವಾಗುತ್ತಿವೆ ಎಂದು ಹಳೆಯ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶವಿದೆ ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ವಾಹನಗಳ ಹೊಗೆ ಹೊರಸೂಸುವಿಕೆಗೆ ಸಂಬಂಧ ಹೊಸ ಮಾನದಂಡಗಳು ಜಾರಿಗೆ ಬಂದಿವೆ. ಇದಕ್ಕೆ ಅನುಗುಣವಾಗಿ ಹಳೆಯ ವಾಹನಗಳು ಹೊಂದಿಕೊಳ್ಳುವುದಿಲ್ಲ. ಹೀಗಾಗಿ, ಹಳೆಯ ವಾಹನಗಳ ನೋಂದಣಿ, ಸಾರಿಗೆ ಅರ್ಹತೆಯ ಶುಲ್ಕ ಏರಿಸುವುದು ಪ್ರಸ್ತಾವನೆಯಲ್ಲಿವೆ.

ಹಳೆಯ ವಾಹನಗಳ ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಉಕ್ಕು ಸಚಿವಾಲಯ ಚಿಂತನೆ ನಡೆಸಿದೆ. ಗುಜರಿಗೆ ಹಾಕಿದ ವಾಹನಗಳ ಬಗ್ಗೆ ಇದು ಮಾಹಿತಿ ಪಡೆದುಕೊಂಡು ಇದರ ಮೇಲೆ ನಿಗಾ ಇರಿಸಲಿದೆ. ಹಳೆಯ ವಾಹನಗಳು ಗುಜರಿಗೆ ಹಾಕಿದರೆ ಅದರ ಮಾಲೀಕರು ಹೊಸ ವಾಹನ ಖರೀದಿಸುವಾಗ ವಿತರಕರು ವಿಶೇಷ ರಿಯಾಯಿತಿ ನೀಡಲಿದ್ದಾರೆ. ಇದಕ್ಕೆ ಮಾನ್ಯತೆ ಪಡೆದ ಗುಜರಿ ಕೇಂದ್ರದ ಪ್ರಮಾಣ ಪತ್ರ ಅಗತ್ಯವಿದೆ ಎಂಬುದು ಸಹ ನೀತಿಯಲ್ಲಿದೆ.​

Last Updated : Sep 30, 2019, 7:18 AM IST

ABOUT THE AUTHOR

...view details