ನವದೆಹಲಿ: 'ಐನ್ ಸ್ಟೈನ್'ನ ಗುರುತ್ವಾಕರ್ಷಣಾ ಸಿದ್ಧಾಂತದ ಆವಿಷ್ಕಾರಕ್ಕೆ ಗಣಿತ ನೆರವಾಗಲಿಲ್ಲ ಎನ್ನುವ ಮೂಲಕ ಅಸಂಬದ್ಧ ಹೇಳಿಕೆ ನೀಡಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಿರುದ್ಧ ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದು 'ಆರ್ಥಿಕ ಕುಸಿತದ ಗುರುತ್ವಾಕರ್ಷಣೆ ಅರ್ಥೈಸಿಕೊಳ್ಳುವಲ್ಲಿ ಅವರು ವಿಫಲವಾಗಿದ್ದಾರೆ' ಎಂದಿದ್ದಾರೆ.
ರಾಜನ್ ಅವರು ತಮ್ಮ ಟ್ವಿಟ್ಟರ್ನಲ್ಲಿ, ಆರ್ಥಿಕ ಮಂದಗತಿಯ ಗುರುತ್ವಾಕರ್ಷಣೆ (#ಗ್ರಾವಿಟಿ) ಅರ್ಥಮಾಡಿಕೊಳ್ಳದಿದ್ದಾಗ, ತಾರ್ಕಿಕ ಪದಗಳು ದುರ್ಬಲವಾಗುತ್ತವೆ. ಗುರುತ್ವ ಮತ್ತು ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಗಣಿತವು ಸಹಾಯ ಮಾಡುವುದಿಲ್ಲ ಎಂದು ಯಾರಾದರೂ ಭಾವಿಸಿದರೆ, ನೀವು ನಿಜವಾಗಿಯೂ ಅಂಕಿಅಂಶಗಳನ್ನು ಮರೆಮಾಚಲು ಯತ್ನಿಸುತ್ತಿದ್ದೀರಿ ಎಂಬುದರ ಸಂಕೇತವಾಗಿದೆ ಎಂದು ಬರೆದುಕೊಂಡಿದ್ದಾರೆ.