ಕರ್ನಾಟಕ

karnataka

ETV Bharat / business

ಇ-ಸಿಗರೇಟ್​ ನಿಷೇಧದಿಂದ ರೈತರಿಗೆ ಲಾಭ: ಕೇಂದ್ರದ ನಿಲುವಿಗೆ ತಂಬಾಕು ವ್ಯಾಪಾರಿಗಳ ಸ್ವಾಗತ - ban e-cigarettes News

ಆರೋಗ್ಯ ಸಚಿವಾಲಯದ ಇ-ಸಿಗರೇಟ್​ ನಿಷೇಧ ಪ್ರಸ್ತಾವನೆಯನ್ನು ಅನುಮೋದಿಸಿದ ಕೇಂದ್ರ ಸಚಿವ ಸಂಪುಟದ ನಡೆಯನ್ನು ಭಾರತೀಯ ತಂಬಾಕು ವ್ಯಾಪಾರಿಗಳ ಒಕ್ಕೂಟ ಸ್ವಾಗತಿಸಿದೆ. ದೇಶಕ್ಕೆ ಮತ್ತು ರೈತರಿಗೆ ಅನುಕೂಲವಲ್ಲದ ಇಂತಹ ಉತ್ಪನ್ನಗಳನ್ನು ನಿಷೇಧಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ.

ಮಟುಪಲ್ಲಿ ಉಮಮಹೇಶ್ವರ ರಾವ್

By

Published : Sep 18, 2019, 6:00 PM IST

ನವದೆಹಲಿ:ಕೇಂದ್ರ ಸಚಿವ ಸಂಪುಟ ಸಭೆ ಇ-ಸಿಗರೇಟ್​ ಉತ್ಪಾದನೆ, ತಯಾರಿಕೆ, ಆಮದು/ರಫ್ತು, ಸಾಗಣೆ, ಮಾರಾಟ, ಹಂಚಿಕೆ, ಸಂಗ್ರಹ ಮತ್ತು ಜಾಹೀರಾತಿನ ಮೇಲೆ ನಿಷೇಧ ಹೇರಿಕೆಗೆ ಅನುಮೋದನೆ ನೀಡಿದ್ದನ್ನು ತಂಬಾಕು ವ್ಯಾಪಾರಿಗಳು ಸ್ವಾಗತಿಸಿದ್ದಾರೆ.

ಭಾರತೀಯ ತಂಬಾಕು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಮಟುಪಲ್ಲಿ ಉಮಾಮಹೇಶ್ವರ ರಾವ್ ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ. ತಂಬಾಕು ಬೆಳೆಯುವ ರೈತರಿಗೆ ಇ-ಸಿಗರೇಟು ಉತ್ಪಾದನೆಯಿಂದ ಪ್ರಯೋಜನ ಪಡೆಯುವುದಿಲ್ಲ. ಇದು ಅಂತಿಮವಾಗಿ ದೇಶಕ್ಕೆ ನಷ್ಟವಾದಂತೆ ಎಂದರು.

ಭಾರತವು ವಿಶ್ವದಲ್ಲೇ ತಂಬಾಕು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ತಂಬಾಕು ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ ಸೇರಿದಂತೆ ಇತರೆ 9 ರಾಜ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿದೆ. ಭಾರತದಲ್ಲಿ ಇ-ಸಿಗರೇಟ್ ಮತ್ತು ವ್ಯಾಪಿಂಗ್ ಉತ್ಪನ್ನಗಳನ್ನು ನಿಷೇಧಿಸುವಂತೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸರ್ಕಾರಕ್ಕೆ ಮನವಿ ಮಾಡಿತ್ತು ಎಂದರು.

ABOUT THE AUTHOR

...view details