ನವದೆಹಲಿ :ವಾಟ್ಸ್ಆ್ಯಪ್ನ ಹೊಸ ಡೇಟಾ ಗೌಪ್ಯತೆ ನೀತಿಯ ಸುತ್ತಲಿನ ವಿವಾದಗಳ ಮಧ್ಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ವಿಚಾರವಾದಿ ಕೆ.ಎನ್.ಗೋವಿಂದಾಚಾರ್ಯ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ, 'ಫೇಸ್ಬುಕ್ ಸಮೂಹದ ಕಂಪನಿಗಳ ನಡುವೆ ಡೇಟಾ ವರ್ಗಾವಣೆಗೆ ತೆರಿಗೆ ವಿಧಿಸುವಂತೆ' ಒತ್ತಾಯಿಸಿದ್ದಾರೆ.
ಅಂತರ್ಜಾಲ ಕಂಪನಿಗಳನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದ್ರೆ ಸಾಕಷ್ಟು ತೆರಿಗೆ ವಿಧಿಸುವುದು. ಭಾರತದಲ್ಲಿನ ಟೆಕ್ ದೈತ್ಯರ ದತ್ತಾಂಶ ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಮುಂಬರುವ ಹಣಕಾಸು ಮಸೂದೆಯಲ್ಲಿ (ಬಜೆಟ್ 2021) ನಿರ್ದಿಷ್ಟ ನಿಬಂಧನೆಗಳನ್ನು ಸೇರಿಸುವ ಮೂಲಕ ನೀವು ಈ ಮಹತ್ವದ ಅಂಶ ಪರಿಗಣಿಸುವಿರಿ ಎಂದು ನಾವು ಭಾವಿಸುತ್ತೇವೆ. ಇದನ್ನು ಜಾರಿಗೆ ತಂದರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲು ನೆರವಾಗಲಿದೆ ಮತ್ತು ಭಾರತೀಯರ ಜೀವನ ಸುಧಾರಿಸಲಿದೆ ಎಂದು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ವಿಶ್ವಾದ್ಯಂತ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ವಾಟ್ಸ್ಆ್ಯಪ್, ಈಗ ಭಾರತದಲ್ಲಿ ನ್ಯಾಯಾಲಯದ ಪ್ರಕರಣವೊಂದನ್ನು ಎದುರಿಸುತ್ತಿದೆ. ತನ್ನ ಹೊಸ ಡೇಟಾ ಗೌಪ್ಯತೆ ನೀತಿಯನ್ನು ಈ ತಿಂಗಳು ಘೋಷಿಸಿತ್ತು. ಟೀಕೆಯ ಬಳಿಕ ಅದನ್ನು ಮೇ 15ಕ್ಕೆ ಮುಂದೂಡಿದೆ.