ಕರ್ನಾಟಕ

karnataka

ಸಿಂಧೂ ನದಿ ಒಪ್ಪಂದ: 2 ವರ್ಷಗಳ ಬಳಿಕ ಭಾರತ-ಪಾಕ್​ ಮುಖಾಮುಖಿ.. ಚರ್ಚಿಸುತ್ತಿರುವ ವಿಷಯಗಳಿವು

By

Published : Mar 23, 2021, 12:52 PM IST

ಮಂಗಳವಾರ ಪ್ರಾರಂಭವಾದ ಎರಡು ದಿನಗಳ ಮಾತುಕತೆಯ ವೇಳೆ ಚೆನಾಬ್ ನದಿಯಲ್ಲಿ ಇರುವ ಭಾರತೀಯ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಪಾಕಿಸ್ತಾನವು ಆಕ್ಷೇಪಣೆ ವ್ಯಕ್ತಪಡಿಸುವ ಸಾಧ್ಯತೆಯಿದೆ. ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ನೀರು ನಿಯೋಜಿತವಾಗಿದೆ.

Indus Commissioners
Indus Commissioners

ನವದೆಹಲಿ: ಸಿಂಧೂ ನದಿ ಜಲ ಒಪ್ಪಂದದಡಿ ಚೆನಾಬ್ ನದಿ ವ್ಯಾಪ್ತಿಯಲ್ಲಿ ಭಾರತದ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಪಾಕಿಸ್ತಾನದ ಆಕ್ಷೇಪಣೆಗಳು ಸೇರಿದಂತೆ ಹಲವು ವಿಷಯಗಳು ಮಂಗಳವಾರ ಇಲ್ಲಿ ನಡೆಯುತ್ತಿರುವ ವಾರ್ಷಿಕ ಸಭೆಯ ಅಂಗವಾಗಿ ಉಭಯ ರಾಷ್ಟ್ರಗಳು ಸಿಂಧೂ ಆಯುಕ್ತರ ಚರ್ಚಿಸುತ್ತಿದ್ದಾರೆ.

ವಾರ್ಷಿಕ ಶಾಶ್ವತ ಸಿಂಧೂ ಆಯೋಗದ ಸಭೆಯ ಮಾತುಕತೆಯು ಎರಡು ವರ್ಷಗಳ ನಂತರ ನಡೆಯುತ್ತಿದೆ. ಭಾರತೀಯ ನಿಯೋಗವನ್ನು ಪಿ.ಕೆ.ಸಕ್ಸೇನಾ ನೇತೃತ್ವ ವಹಿಸುತ್ತಿದ್ದು, ಅವರ ಜತೆಗೆ ಕೇಂದ್ರ ಜಲ ಆಯೋಗ, ಕೇಂದ್ರ ವಿದ್ಯುತ್ ಪ್ರಾಧಿಕಾರ ಮತ್ತು ರಾಷ್ಟ್ರೀಯ ಜಲವಿದ್ಯುತ್ ನಿಗಮದ ಸಲಹೆಗಾರರು ಸೇರಿಕೊಳ್ಳಲಿದ್ದಾರೆ.

ಪಾಕಿಸ್ತಾನದ ನಿಯೋಗವನ್ನು ಸೈಯದ್ ಮುಹಮ್ಮದ್ ಮೆಹರ್ ಅಲಿ ಶಾ ನೇತೃತ್ವ ವಹಿಸಿದ್ದಾರೆ. ನಿಯೋಗ ಸೋಮವಾರ ಸಂಜೆ ದೆಹಲಿಗೆ ಆಗಮಿಸಿತು. ಮಂಗಳವಾರ ಪ್ರಾರಂಭವಾದ ಎರಡು ದಿನಗಳ ಮಾತುಕತೆಯ ವೇಳೆ ಚೆನಾಬ್ ನದಿಯಲ್ಲಿ ಇರುವ ಭಾರತೀಯ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಪಾಕಿಸ್ತಾನವು ಆಕ್ಷೇಪಣೆ ವ್ಯಕ್ತಪಡಿಸುವ ಸಾಧ್ಯತೆಯಿದೆ. ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ನೀರು ನಿಯೋಜಿತವಾಗಿದೆ.

ಇದನ್ನೂ ಓದಿ: ಲಾಕ್​ಡೌನ್​ ವೇಳೆಯ 6 ತಿಂಗಳ ಸಾಲ ನಿಷೇಧಕ್ಕೆ ಚಕ್ರ ಬಡ್ಡಿ, ದಂಡ ವಿಧಿಸದಂತೆ 'ಸುಪ್ರೀಂ'ಕೋರ್ಟ್​ ಮಹತ್ವದ ತೀರ್ಪು

ಸಿಂಧೂ ನದಿ ಜಲ ಒಪ್ಪಂದದ ಕುರಿತು ವರ್ಷಕ್ಕೆ ಎರಡು ಬಾರಿ ಮಾತುಕತೆ ನಡೆಸಬೇಕು ಮತ್ತು ಯೋಜನೆಯ ಪ್ರದೇಶಕ್ಕೆ ತಾಂತ್ರಿಕ ಭೇಟಿ ಆಯೋಜಿಸಬೇಕು ಎಂದು ಭಾರತ- ಪಾಕಿಸ್ತಾನ ತೀರ್ಮಾನಿಸಿದ್ದವು. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು 2019ರ ಆಗಸ್ಟ್​ನಲ್ಲಿ ರದ್ದಪಡಿಸಿದ ನಂತರ ಉಭಯ ಆಯುಕ್ತರ ನಡುವೆ ಸಭೆಯ ನಡೆಯಲಿಲ್ಲ. ಅಂದಿನಿಂದ ಭಾರತವು ಈ ಪ್ರದೇಶಕ್ಕಾಗಿ ಹಲವು ಜಲವಿದ್ಯುತ್ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಈ ಪೈಕಿ ಡರ್ಬುಕ್ ಶ್ಯೋಕ್ (19 ಮೆಗಾವ್ಯಾಟ್), ಶಂಕೂ (18.5 ಮೆಗಾವ್ಯಾಟ್), ನಿಮು ಚಿಲ್ಲಿಂಗ್ (24 ಮೆಗಾವ್ಯಾಟ್), ರೊಂಗ್ಡೊ (12 ಮೆಗಾವ್ಯಾಟ್), ರತನ್ ನಾಗ್ (10.5 ಮೆಗಾವ್ಯಾಟ್), ಲೇಹ್‌ನಲ್ಲಿ ಕಾರ್ಗಿಲ್‌ಗಾಗಿ ಮಾಂಗ್‌ದುಮ್ ಸಾಂಗ್ರಾ (19 ಮೆಗಾವ್ಯಾಟ್), ಕಾರ್ಗಿಲ್ ಹಂಡರ್‌ಮ್ಯಾನ್ (25 ಮೆಗಾವ್ಯಾಟ್) ಮತ್ತು ತಮಾಶಾ (12 ಮೆಗಾವ್ಯಾಟ್) ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಗಳ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು. ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ನಿರೀಕ್ಷೆಯಿದೆ. ಸಭೆಗೂ ಮುನ್ನ ಸಕ್ಸೇನಾ ಅವರು, 'ಒಪ್ಪಂದದಡಿ ಭಾರತ ತನ್ನ ಹಕ್ಕುಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಬದ್ಧವಾಗಿದೆ. ಚರ್ಚೆಯ ಮೂಲಕ ಸಮಸ್ಯೆಗಳ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದರಲ್ಲಿ ನಂಬಿಕೆ ಇರಿಸಿದೆ' ಎಂದರು.

ABOUT THE AUTHOR

...view details