ಕರ್ನಾಟಕ

karnataka

By

Published : Feb 5, 2021, 12:15 PM IST

ETV Bharat / business

2022ರ ವಿತ್ತೀಯ ವರ್ಷದಲ್ಲಿ ಶೇ 10.5ರಷ್ಟು ಜಿಡಿಪಿ ಬೆಳವಣಿಗೆ - ಆರ್​ಬಿಐ ಅಂದಾಜು

ಹಣದುಬ್ಬರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 5.2ಕ್ಕೆ ಇಳಿಯಲಿದೆ. ಮೂರನೇ ತ್ರೈಮಾಸಿಕದ ವೇಳೆಗೆ ಕ್ರಮೇಣ ಶೇ 4.3ಕ್ಕೆ ಇಳಿಯಲಿದೆ ಎಂದು ಕೇಂದ್ರ ಬ್ಯಾಂಕ್ ನಿರೀಕ್ಷಿಸಿದೆ. ಇದರಿಂದ ತರಕಾರಿ ಬೆಲೆಗಳು ಸದ್ಯದಲ್ಲಿಯೇ ಸಮತಟ್ಟಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

GDP
GDP

ಮುಂಬೈ:ಆರ್ಥಿಕ ಚಟುವಟಿಕೆಗಳಲ್ಲಿನ ಚೇತರಿಕೆ ಕಂಡುಬರುತ್ತಿರುವ ಏಪ್ರಿಲ್ 1ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರವನ್ನು ಶೇ 10.5ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ.

ಹಣದುಬ್ಬರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 5.2ಕ್ಕೆ ಇಳಿಯಲಿದೆ. ಮೂರನೇ ತ್ರೈಮಾಸಿಕದ ವೇಳೆಗೆ ಕ್ರಮೇಣ ಶೇ 4.3ಕ್ಕೆ ಇಳಿಯಲಿದೆ ಎಂದು ಕೇಂದ್ರ ಬ್ಯಾಂಕ್ ನಿರೀಕ್ಷಿಸಿದೆ. ಇದರಿಂದ ತರಕಾರಿ ಬೆಲೆಗಳು ಸದ್ಯದಲ್ಲಿಯೇ ಸಮತಟ್ಟಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಬೆಳವಣಿಗೆಯ ದೃಷ್ಟಿಕೋನವು ಗಮನಾರ್ಹವಾಗಿ ಸುಧಾರಿಸಿದೆ. ವ್ಯಾಕ್ಸಿನೇಷನ್ ಡ್ರೈವ್ ಆರ್ಥಿಕ ಮರುಕಳಿಸುವಿಕೆಗೆ ನೆರವಾಗುತ್ತಿದೆ. ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ 10.5ಕ್ಕೆ ಏರಿಕೆಯಾಗಲಿದೆ ಎಂದರು.

ಇದನ್ನೂ ಓದಿ: 2024ಕ್ಕೆ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಸಾಧಿಸುತ್ತೇವೆ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ವಿಶ್ವಾಸ

ನಮ್ಮ ಆದಾಯದ ಅಂಕಿ ಅಂಶವು ಅತಿಯಾಗಿ ಹೇಳಲಾಗಿಲ್ಲ. ನಾವು ನಾಮಮಾತ್ರ ಜಿಡಿಪಿಯನ್ನು ಶೇ 14.4 ಮತ್ತು ಆದಾಯದ ಬೆಳವಣಿಗೆಯನ್ನು ಶೇ 16.7ಕ್ಕೆ ತೆಗೆದುಕೊಂಡಿದ್ದೇವೆ. ಆದ್ದರಿಂದ, ಚೇತರಿಕೆಯು ಕೇವಲ ಶೇ 1.16ರಷ್ಟಾಗಿದೆ. ಇದಕ್ಕಿಂತ ಹೆಚ್ಚಿನದನ್ನು ನಾವು ಪಡೆಯುತ್ತೇವೆ ಎಂಬುದನ್ನು ಭಾವಿಸುತ್ತೇವೆ. ನಾವು ಖಂಡಿತವಾಗಿಯೂ ಶೇ 6.8ರೊಳಗೆ ಇರುತ್ತೇವೆ ಮತ್ತು ಇದು ಕಡಿಮೆ ಆಗಿರಬಹುದು ಎಂದು ಆರ್ಥಿಕ ಸಚಿವಾಲಯದ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದರು.

ಮಾರ್ಚ್ ಅಂತ್ಯದ ವೇಳೆಗೆ ಹಣದುಬ್ಬರ ಗುರಿಯನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಆರ್‌ಬಿಐ ಗವರ್ನರ್​ ತಿಳಿಸಿದ್ದಾರೆ.

ABOUT THE AUTHOR

...view details