ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬದಲಾದ ವಿಶ್ವದ ವಾಣಿಜ್ಯ-ವಹಿವಾಟು ಚಲನೆಯ ಮಧ್ಯೆ ಉತ್ಪಾದನಾ ಕ್ಷೇತ್ರ ವೃದ್ಧಿಯತ್ತ ದೃಷ್ಟಿನೆಟ್ಟಿದ್ದು, 'ಹೊಸ ವಿದೇಶಿ ವ್ಯಾಪಾರ ನೀತಿ' ರೂಪಿಸುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ.
ಆಮದು ಪ್ರಮಾಣ ಕಡಿಮೆ ಮಾಡುವ ಒತ್ತಡವಿದ್ದರೂ ಯಾವುದೇ ಪ್ರದೇಶದಿಂದ ಒಳಬರುವ ಸಾಗಣೆಯನ್ನು ರದ್ದುಗೊಳಿಸದಿರಲು ಮೋದಿ ಸರ್ಕಾರ ಯಾರನ್ನೂ ಅವಲಂಬಿಸುವುದಿಲ್ಲ ಎಂದು ಈ ನೀತಿಯಲ್ಲಿ ತೊಡಗಿಸಿಕೊಂಡ ಅಧಿಕಾರಿ ಒಬ್ಬರು ಹೇಳಿದ್ದಾರೆ.
ಜಾಗತಿಕ ಮತ್ತು ಸ್ಥಳೀಯ ಪೂರೈಕೆ ಸರಪಳಿ ಜತೆ ಹೊಂದಾಣಿಕೆ ಮಾಡುವ ಮೂಲಕ 'ಮೇಕ್ ಇನ್ ಇಂಡಿಯಾ' ಅಭಿಯಾನದತ್ತ ಹೆಚ್ಚು ಗಮನಹರಿಸಲಾಗುವುದು ಎಂದಿದ್ದಾರೆ.
ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ವಿದೇಶಿ ಮತ್ತು ದೇಶಿಯ ಕಂಪನಿಗಳನ್ನು ಭಾರತವನ್ನು ತಮ್ಮ ಉತ್ಪಾದನಾ ಕೇಂದ್ರವನ್ನಾಗಿ ಮಾಡುವಂತೆ ಕೇಳಿಕೊಂಡರು. 'ಮೇಕ್ ಇನ್ ಇಂಡಿಯಾ'ವನ್ನು 'ಮೇಕ್ ಫಾರ್ ವರ್ಲ್ಡ್' ಆಗಿಸುವಂತೆ ಕರೆ ಕೊಟ್ಟಿದ್ದರು.
ಹೊಸ ವಿದೇಶಿ ವ್ಯಾಪಾರ ನೀತಿಯು ಆಮದಿನ ಪ್ರಮಾಣ ಕಡಿಮೆ ನಾಡುವ ಬಗ್ಗೆ ಅಲ್ಲ. ಈಗಿನ ಸಮಯದಲ್ಲಿ ನಾವು ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಅದು ಆರ್ಥಿಕತೆಗೆ ಹಾನಿ ಮಾಡುತ್ತದೆ. ಭಾರತವು ಜಗತ್ತಿಗೆ ಉತ್ಪಾದನೆ ಒದಗಿಸಲು ಸಾಧ್ಯವಾಗುವಂತೆ ಉತ್ಪಾದನಾ ಉದ್ಯಮ ವೃದ್ಧಿಸುವತ್ತ ಕೇಂದ್ರ ಸರ್ಕಾರ ಎದುರು ನೋಡುತ್ತಿದೆ. ಅನೇಕ ಕಂಪನಿಗಳು ಈಗಾಗಲೇ ಭಾರತಕ್ಕೆ ಬಂದು ಇಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿವೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್ ಐಎನ್ಗೆ ತಿಳಿಸಿದರು.