ಕರ್ನಾಟಕ

karnataka

ETV Bharat / business

'ನ್ಯಾಯ್'​ಗಾಗಿ ನೂತನ ತೆರಿಗೆ ಪದ್ಧತಿ ತರಲ್ಲ: ಮನಮೋಹನ್ ಸಿಂಗ್​ - undefined

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಶೇ 20ರಷ್ಟು ಕಡು ಬಡವ ಕುಟುಂಬಗಳಿಗೆ ಕನಿಷ್ಠ ಆದಾಯ ಖಾತರಿಗೊಳಿಸುವ 'ನ್ಯೂನತಮ್ ಆದಾಯ ಯೋಜನೆ'ಯ (ನ್ಯಾಯ್) ಮೂಲಕ ವಾರ್ಷಿಕ ₹ 72,000 ಅವರ ಖಾತೆಗೆ ನೇರವಾಗಿ ಜಮೆ ಮಾಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿದೆ.

ಸಂಗ್ರಹ ಚಿತ್ರ

By

Published : Apr 21, 2019, 4:49 PM IST

ನವದೆಹಲಿ: ಭಾರತದ ವಾರ್ಷಿಕ ಆರ್ಥಿಕ ವಹಿವಾಟು 3 ಟ್ರಿಲಿಯನ್​ ಡಾಲರ್​ ಇದ್ದು, ನ್ಯಾಯ್​ ಯೋಜನೆಗೆ ತಗುಲುವ ವೆಚ್ಚವನ್ನು ಈ ಆರ್ಥಿಕತೆಯಲ್ಲಿ ಭರಿಸಬಹುದಾಗಿದೆ. ಇದಕ್ಕಾಗಿ ಹೊಸ ತೆರಿಗೆ ನೀತಿ ತರುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್​ ಸಿಂಗ್ ಹೇಳಿದ್ದಾರೆ.

ನ್ಯಾಯ್‌ ಯೋಜನೆ ಬಡತನದ ಮೇಲಿನ ಸರ್ಜಿಕಲ್‌ ದಾಳಿ ಎಂದು ಕಾಂಗ್ರೆಸ್‌ ಬಿಂಬಿಸಿದೆ. ಆದರೆ ಈ ಯೋಜನೆಗೆ ಹಣವನ್ನು ಹೊಂದಿಸುವ ಬಗ್ಗೆ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಪ್ರಶ್ನಿಸುತ್ತಿವೆ.

ನ್ಯಾಯ್ ಯೋಜನೆಗೆ ಜಿಡಿಪಿಯ ಶೇ 1.2ರಿಂದ 1.5ರಷ್ಟು ಖರ್ಚು ತಗಲುತ್ತದೆ. ರಾಷ್ಟ್ರದ ವಾರ್ಷಿಕ ಆರ್ಥಿಕ ವಹಿವಾಟು 3 ಟ್ರಿಲಿಯನ್‌ ಡಾಲರ್‌ ಇದೆ. ನ್ಯಾಯ್‌ ಯೋಜನೆಗೆ ತಗಲುವ ವೆಚ್ಚ ಇದರಲ್ಲಿ ಭರಿಸಬಹುದು. ನೂತನ ಆದಾಯ ತೆರಿಗೆ ನೀತಿ ಜಾರಿಗೆ ತರುವ ಅಗತ್ಯವಿಲ್ಲ. ಮಧ್ಯಮ ವರ್ಗದ ಜನರ ಮೇಲೆ ಹೊಸ ತೆರಿಗೆ ಬಿಸಿ ತಟ್ಟುವುದಿಲ್ಲ. ಹಣಕಾಸಿನ ಶಿಸ್ತು ಮೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಈ ಯೋಜನೆಯಿಂದ ಹೊಸ ಕೈಗಾರಿಕೆಗಳು ಹಾಗೂ ಉದ್ಯೋಗಗಳ ಸೃಷ್ಟಿ ಆಗುವ ಸಾಧ್ಯತೆ ಇದೆ. ದೇಶ ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಬಡವರ ಪ್ರಮಾಣ ಶೇ 70ರಷ್ಟು ಇತ್ತು. ಈ ಏಳು ದಶಕದಲ್ಲಿ ಶೇ 20ಕ್ಕೆ ಇಳಿಕೆ ಆಗಿದೆ. ಇದೀಗ ಉಳಿದ ಅಲ್ಪ ಪ್ರಮಾಣದ ಬಡತನವನ್ನು ಹೋಗಲಾಡಿಸುವ ಸಂದರ್ಭ ಬಂದಿದೆ ಎಂದು ಮನಮೋಹನ್‌ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details