ಕರ್ನಾಟಕ

karnataka

ETV Bharat / business

ಬ್ಯಾಂಕ್​ಗಳ ವಿಲೀನದಿಂದ ಒಂದು ಶಾಖೆಯೂ ಮುಚ್ಚುವುದಿಲ್ಲ: ಕೆನರಾ ಬ್ಯಾಂಕ್ ಎಂಡಿ ಅಭಯ - ಬ್ಯಾಂಕ್​ಗಳ ವಿಲೀನ

ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 10 ರಾಷ್ಟ್ರೀಯ ಬ್ಯಾಂಕ್​ಗಳ ವಿಲೀನದಲ್ಲಿ ಕೆನರಾ, ಸಿಂಡಿಕೇಟ್​ ಹಾಗೂ ಕಾರ್ಪೊರೇಷನ್​ ಬ್ಯಾಂಕ್​ಗಳು ಸಹ ಒಳಗೊಂಡಿವೆ. ಹೀಗಾಗಿ, ಕಡಿಮೆ ದೂರ ಅಂತರದಲ್ಲಿರುವ ಕೆನರಾ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳ ಶಾಖೆಗಳು ಮುಚ್ಚಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಸಾಂದರ್ಭಿಕ ಚಿತ್ರ

By

Published : Sep 3, 2019, 3:23 PM IST

ಬೆಂಗಳೂರು:ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯಿಂದ ಕೆನರಾ ಮತ್ತು ಸಿಂಡಿಕೇಟ್​​ ಬ್ಯಾಂಕ್​ಗಳ ಯಾವುದೇ ಶಾಖೆಗಳು ಮುಚ್ಚುವುದಿಲ್ಲ ಎಂದು ಕೆನರಾ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಆರ್. ಎ. ಶಂಕರ ನಾರಾಯಣನ್ ಅವರು ಭರವಸೆ ನೀಡಿದ್ದಾರೆ.

ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದ 10 ರಾಷ್ಟ್ರೀಯ ಬ್ಯಾಂಕ್​ಗಳ ವಿಲೀನದಲ್ಲಿ ಕೆನರಾ, ಸಿಂಡಿಕೇಟ್​ ಹಾಗೂ ಕಾರ್ಪೊರೇಷನ್​ ಬ್ಯಾಂಕ್​ಗಳು ಸಹ ಒಳಗೊಂಡಿವೆ. ಹೀಗಾಗಿ, ಕಡಿಮೆ ದೂರ ಅಂತರದಲ್ಲಿರುವ ಕೆನರಾ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳ ಶಾಖೆಗಳು ಮುಚ್ಚಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಬ್ಯಾಂಕ್​ಗಳ ವಿಲೀನ ಬಗ್ಗೆ ಮಾತನಾಡಿದ ಕೆನರಾ ಬ್ಯಾಂಕ್ ಎಂಡಿ

ವಿಲೀನ ಪ್ರಕ್ರಿಯೆ ಪ್ರಸ್ತಾವನೆಯಲ್ಲಿ ಕೇವಲ ಬ್ಯಾಂಕ್​ಗಳ ಜೋಡಣೆ ಇದೆ. ಆದರೆ, ಶಾಖೆಗಳ ಮುಚ್ಚುವಿಕೆ ಇಲ್ಲ. ಬ್ಯಾಂಕ್​ಗಳ ಯಾವುದೇ ಸಿಬ್ಬಂದಿಗೆ ಉದ್ಯೋಗ ಕಳೆದುಕೊಳ್ಳುವ ಕುರಿತು ಆತಂಕ ಪಡಬೇಕಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ಕೆನರಾ ಬ್ಯಾಂಕ್​ನಲ್ಲಿ 58,000 ಹಾಗೂ ಸಿಂಡಿಕೇಟ್ ಬ್ಯಾಂಕ್​ನಲ್ಲಿ 30,000 ಉದ್ಯೋಗಿಗಳು ಸೇರಿ ಒಟ್ಟು 98,000 ನೌಕರರು ಇದ್ದಾರೆ. ವಿಲೀನದ ಬಳಿಕವೂ ಉಭಯ ಬ್ಯಾಂಕ್​ಗಳಲ್ಲಿ ಸಿಬ್ಬಂದಿ ಯಥಾವತ್ತಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಮತ್ತೆ ವಿಜಯಾ ಬ್ಯಾಂಕ್ ವಿಲೀನ ಆಗಿದ್ದಾಗಲೂ ಯಾವುದೇ ಶಾಖೆಗಳು ಮುಚ್ಚಿರಲಿಲ್ಲ. ಯಾವೊಬ್ಬ ಸಿಬ್ಬಂದಿಯನ್ನೂ ಕೆಲಸದಿಂದ ವಜಾ ಮಾಡಿರಲಿಲ್ಲ ಎಂದು ವಿವರಣೆ ನೀಡಿದರು.

ABOUT THE AUTHOR

...view details