ಕರ್ನಾಟಕ

karnataka

ETV Bharat / business

ತೆರಿಗೆ ಕಡಿತದ ನಿರೀಕ್ಷೆಯಲ್ಲಿದ್ದ ವಾಹನೋದ್ಯಮಿಗಳಿಗೆ ಶಾಕ್​: ವಿದೇಶಿಗರಿಗೆ ಕೊಡುತ್ತಿರುವ ರಾಯಲ್ಟಿ ತಗ್ಗಿಸಿ- ಕೇಂದ್ರ ಸಲಹೆ

ಪ್ರಸ್ತುತ ಜಿಎಸ್​ಟಿ ದರಗಳಿಗಿಂತ ತೆರಿಗೆ ದರ ಹೆಚ್ಚಾಗಿದ್ದರೂ ಜಿಎಸ್​​ಟಿ ಪೂರ್ವದಲ್ಲಿ ಆಟೋಮೊಬೈಲ್ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂಬ ಅಂಶವನ್ನು ಸಚಿವಾಲಯದ ಮೂಲಗಳು ಸೂಚಿಸುತ್ತವೆ. ಅಧಿಕಾರಿಗಳ ಪ್ರಕಾರ, ಇದು ಭಾರಿ ಪ್ರಮಾಣದ ರಾಯಧನದಿಂದ (ರಾಯಲ್ಟಿ) ಸ್ಪಷ್ಟವಾಗಿದೆ. ವಾಹನಗಳ ತಯಾರಕರು ವಿದೇಶದಲ್ಲಿರುವ ತಮ್ಮ ಮೂಲ ಕಂಪನಿಗಳಿಗೆ ಹೆಚ್ಚಿನ ರಾಯಲ್ಟಿ ಪಾವತಿಸುತ್ತಿದ್ದಾರೆ.

By

Published : Sep 17, 2020, 9:46 PM IST

Automobile industry
ವಾಹನೋದ್ಯಮ ಕ್ಷೇತ್ರ

ನವದೆಹಲಿ: ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಿ ವಾಹನೋದ್ಯಮ ತೆರಿಗೆ ಕಡಿದ ನಿರೀಕ್ಷೆಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 'ವಾಹನ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಮನಸ್ಥಿತಿಯಲ್ಲಿ ಇಲ್ಲ' ಎಂಬುದು ತಿಳಿದುಬಂದಿದೆ.

ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ವಾಹನ ಕ್ಷೇತ್ರಕ್ಕೆ ತೆರಿಗೆ ರಿಯಾಯಿತಿ ನೀಡುವ ಮನಸ್ಥಿತಿಯಲ್ಲಿಲ್ಲ. ಜಿಎಸ್‌ಟಿಯ ಹೆಚ್ಚಿನ ದರದಿಂದಾಗಿ ದೇಶದ ವಾಹನ ವಲಯವು ಹೆಣಗಾಡುತ್ತಿದೆ ಎಂಬ ಅಭಿಪ್ರಾಯವನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ವಾಹನಗಳ ಮೇಲಿನ ಜಿಎಸ್‌ಟಿ ದರಗಳು ಜಿಎಸ್‌ಟಿ ಪೂರ್ವದಲ್ಲಿದ್ದ ವ್ಯಾಟ್ ಮತ್ತು ಅಬಕಾರಿ ಸುಂಕದ ದರಕ್ಕಿಂತ ಕಡಿಮೆಯಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲವೊಂದು ತಿಳಿಸಿದೆ.

ಕಳೆದ ಮೂರು ದಶಕಗಳಿಂದ ವಾಹನಗಳ ಮೇಲಿನ ದೇಶದ ತೆರಿಗೆ ನೀತಿ ಸಾಕಷ್ಟು ಸ್ಥಿರವಾಗಿದೆ. ಇದು ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಆಮದುಗಳಿಂದ ಸಮಂಜಸವಾದ ರಕ್ಷಣೆ ನೀಡುವ ಮೂಲಕ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಜಿಎಸ್​ಟಿ ದರಗಳಿಗಿಂತ ತೆರಿಗೆ ದರ ಹೆಚ್ಚಾಗಿದ್ದರೂ ಜಿಎಸ್​​ಟಿ ಪೂರ್ವದಲ್ಲಿ ಆಟೋಮೊಬೈಲ್ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂಬ ಅಂಶವನ್ನು ಸಚಿವಾಲಯದ ಮೂಲಗಳು ಸೂಚಿಸುತ್ತವೆ. ಅಧಿಕಾರಿಗಳ ಪ್ರಕಾರ, ಇದು ಭಾರಿ ಪ್ರಮಾಣದ ರಾಯಧನದಿಂದ (ರಾಯಲ್ಟಿ) ಸ್ಪಷ್ಟವಾಗಿದೆ. ವಾಹನಗಳ ತಯಾರಕರು ವಿದೇಶದಲ್ಲಿರುವ ತಮ್ಮ ಮೂಲ ಕಂಪನಿಗಳಿಗೆ ಹೆಚ್ಚಿನ ರಾಯಲ್ಟಿ ಪಾವತಿಸುತ್ತಿದ್ದಾರೆ.

ಭಾರತದ ವಾಹನ ವಲಯವು ವಿದೇಶಿ ಉದ್ಯಮಿಗಳ ಪ್ರಾಬಲ್ಯ ಹೊಂದಿದೆ. ಜಪಾನಿನ ವಾಹನ ದೈತ್ಯ ಕಂಪನಿಗಳಾದ ಸುಜುಕಿ, ಟೊಯೋಟಾ, ಹೋಂಡಾ ಮತ್ತು ಕೊರಿಯಾದ ಉತ್ಪಾದಕ ಹ್ಯುಂಡೈ ಉತ್ಪಾದಿಸುವ ಕಾರುಗಳು ದೇಶದ ರಸ್ತೆಗಳಲ್ಲಿ ದಶಕಗಳಿಂದ ಪ್ರಾಬಲ್ಯ ಹೊಂದಿವೆ.

ಜಪಾನೀಸ್ ಮತ್ತು ದಕ್ಷಿಣ ಕೊರಿಯಾದ ಆಟೋಮೊಬೈಲ್ ದೈತ್ಯರ ಜೊತೆಗೆ ಯುರೋಪಿಯನ್ ಕಾರು ತಯಾರಕರಾದ ಮರ್ಸಿಡಿಸ್ ಬೆಂಜ್, ವೋಕ್ಸ್‌ವ್ಯಾಗನ್, ಬಿಎಂಡಬ್ಲ್ಯು ದೇಶದಲ್ಲಿ ದೀರ್ಘಕಾಲ ಅಭಿವೃದ್ಧಿ ಹೊಂದಿದವು. ನಿಧಾನಗತಿಯ ಆರ್ಥಿಕತೆಯಿಂದಾಗಿ ಉದ್ಯಮವು ಕೆಲ ಮಾಸಿಕಗಳಿಂದ ಹೆಣಗಾಡುತ್ತಿದೆ. ಬೇಡಿಕೆ ಪುನರುಜ್ಜೀವನಗೊಳಿಸಲು ಜಿಎಸ್​ಟಿ ದರ ಕಡಿತಗೊಳಿಸುವ ಬೇಡಿಕೆ ಇರಿಸಲಾಗಿತ್ತು.

ದೇಶದಲ್ಲಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಿದ್ದಕ್ಕಾಗಿ ವಾಹನ ಉದ್ಯಮವನ್ನು ಶ್ಲಾಘಿಸಲಾಗುತ್ತದೆ. ಹೆಚ್ಚಿನ ಜಿಎಸ್‌ಟಿ ದರಗಳ ಕಾರಣದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ವಾಹನೋದ್ಯಮವು ತನ್ನ ತಲುಪಬೇಕಾದ ಕ್ಷೇತ್ರವನ್ನು ತಲುಪಿಸಿದೆ. ಇದು ದೊಡ್ಡ ಹೂಡಿಕೆ ಮತ್ತು ಉದ್ಯೋಗದ ಮೂಲಕ ಕೊಡುಗೆ ನೀಡಿದೆ. ಇದ್ದಕ್ಕಿದ್ದಂತೆ ವಾಹನಗಳ ಮೇಲಿನ ತೆರಿಗೆ ದರಗಳ ಬಗ್ಗೆ ಕೆಲವೆಡೆ ಭಿನ್ನಾಭಿಪ್ರಾಯ ಇರುವುದು ಆಶ್ಚರ್ಯಕರವಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲವೊಂದು ಈಟಿವಿ ಭಾರತಗೆ ತಿಳಿಸಿದೆ.

ವಾಸ್ತವವಾಗಿ ಈ ಕಂಪನಿಗಳು ಜಿಎಸ್‌ಟಿಯನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಕೇಳುವ ಬದಲು ವಿದೇಶದಲ್ಲಿ ತಮ್ಮ ಮೂಲ ಕಂಪನಿಗಳಿಗೆ ನೀಡುವ ರಾಯಲ್ಟಿ ಪಾವತಿಗಳನ್ನು ಕಡಿತಗೊಳಿಸುವ ಮೂಲಕ ತಮ್ಮ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕೆಗಳಿಂದ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ, ವಾಹನ ತಯಾರಕರು ಭಾರಿ ವಿದೇಶಿ ಸಂಸ್ಥೆಗಳ ತಮ್ಮ ಮೂಲ ಕಂಪನಿಗಳಿಗೆ ಭಾರಿ ಪ್ರಮಾಣದ ರಾಯಲ್ಟಿ ಪಾವತಿಯನ್ನು ಕಡಿಮೆ ಮಾಡುವಂತೆ ಆಟೋ ಕಂಪನಿಗಳಿಗೆ ಕೋರಿದ್ದರು.

-ಕೃಷ್ಣಾನಂದ್ ತ್ರಿಪಾಠಿ

ABOUT THE AUTHOR

...view details