ಕರ್ನಾಟಕ

karnataka

'ರೈತ ಕೈಕಟ್ಟಿ ಕುಳಿತರೆ ನಾವ್ಯಾರೂ ಬದುಕುಳಿಯಲು ಸಾಧ್ಯವಿಲ್ಲ': ನಮೋ ಸರ್ಕಾರಕ್ಕೆ ಚಿದಂಬರಂ ಎಚ್ಚರಿಕೆ

By

Published : Jan 4, 2021, 10:56 PM IST

ಚಿದಂಬರಂತಮ್ಮ ಟ್ವಿಟರ್​​ನಲ್ಲಿ, ನನ್ನ ನೆಚ್ಚಿನ ಕವಿ ಸಂತ ತಿರುವಳ್ಳುವರ್ 2000 ವರ್ಷಗಳ ಹಿಂದೆಯೇ 'ರೈತರು ಕೈಕಟ್ಟಿ ಕುಳಿತುಕೊಂಡರೆ ಅತೀವ ಜೀವನ ಉತ್ಸಾಹ ಇರುವ ಮನಷ್ಯ ಕೂಡ ಬದುಕುಳಿಯಲು ಸಾಧ್ಯವಿಲ್ಲ' ಎಂದು ಬರೆದಿದ್ದರು. ಅದು ಇಂದು ಎಷ್ಟು ನಿಜವಾಗಿದೆ. ತಾವು ಮೋಸ ಹೋಗುತ್ತಿದ್ದೇವೆ ಎಂದು ನಂಬುವ ರೈತರ ಕೋಪವನ್ನು ಯಾವುದೇ ಸರ್ಕಾರ ಎದುರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Chidambaram
ಚಿದಂಬರಂ

ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ತಮ್ಮ ಪ್ರತಿಭಟನೆ ಮುಂದುವರಿಸುತ್ತಿರುವ ಬೆನ್ನಲ್ಲೇ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ರೈತರ ಕೋಪದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಿದಂಬರಂತಮ್ಮ ಟ್ವಿಟರ್​​ನಲ್ಲಿ, ನನ್ನ ನೆಚ್ಚಿನ ಕವಿ ಸಂತ ತಿರುವಳ್ಳುವರ್ 2000 ವರ್ಷಗಳ ಹಿಂದೆಯೇ 'ರೈತರು ಕೈಕಟ್ಟಿ ಕುಳಿತುಕೊಂಡರೆ ಅತೀವ ಜೀವನ ಉತ್ಸಾಹ ಇರುವ ಮನಷ್ಯ ಕೂಡ ಬದುಕುಳಿಯಲು ಸಾಧ್ಯವಿಲ್ಲ' ಎಂದು ಬರೆದಿದ್ದರು. ಅದು ಇಂದು ಎಷ್ಟು ನಿಜವಾಗಿದೆ. ತಾವು ಮೋಸ ಹೋಗುತ್ತಿದ್ದೇವೆ ಎಂದು ನಂಬುವ ರೈತರ ಕೋಪವನ್ನು ಯಾವುದೇ ಸರ್ಕಾರ ಎದುರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ಪ್ರತಿಭಟನಾಕಾರ ರೈತರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವೆ ಏಳನೇ ಸುತ್ತಿನ ಮಾತುಕತೆ ಫಲಪ್ರದವಾಗುವಲ್ಲಿ ವಿಫಲವಾಗಿದೆ. 8ನೇ ಸುತ್ತಿನ ಮಾತುಕತೆ ಜನವರಿ 8ರಂದು ನಡೆಯಲಿದೆ.

ಕೃಷಿ ಕಾನೂನುಗಳನ್ನು ರದ್ದುಗೊಳಿಸದಿರುವ ಸರ್ಕಾರ ಪಶ್ಚಾತ್ತಾಪ ಪಡಬೇಕು ಮತ್ತು ಅದನ್ನು ಒಪ್ಪಿಕೊಳ್ಳಬೇಕು. ಯಾವುದೇ ಹೊಸ ಕಾನೂನು ಕೃಷಿ ಸಮುದಾಯದ ಅಗತ್ಯತೆ ಮತ್ತು ಅವರ ಆಸೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details