ಕರ್ನಾಟಕ

karnataka

By

Published : Dec 19, 2020, 5:10 PM IST

ETV Bharat / business

ಕೇಂದ್ರ ಬಜೆಟ್​ 2021: ಬಜೆಟ್ ಪೂರ್ವ ಸಭೆ ನಡೆಸಿದ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ 9ನೇ ಬಜೆಟ್ ಪೂರ್ವ ಸಮಾಲೋಚನೆಯನ್ನು ಉದ್ಯಮ, ಸೇವೆಗಳು ಮತ್ತು ವ್ಯಾಪಾರ ಮುಖ್ಯಸ್ಥರ ಜತೆ ನಡೆಸಿದರು. ಡಾ.ಬಿ.ಪಾಂಡೆ, ಟಿ.ವಿ.ಸೋಮನಾಥನ್, ತರುಣ್ ಬಜಾಜ್ ಮತ್ತು ಕೆ.ವಿ.ಸುಬ್ರಮಣಿಯನ್ ಸಹ ಭಾಗವಹಿಸಿದ್ದರು ಎಂದು ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.

Nirmala Sitharaman
ನಿರ್ಮಲಾ ಸೀತಾರಾಮನ್

ನವದೆಹಲಿ: ಮುಂಬರುವ ಕೇಂದ್ರ ಬಜೆಟ್ 2021-22ರ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮ, ಸೇವೆಗಳು ಮತ್ತು ವ್ಯಾಪಾರ ಮುಖ್ಯಸ್ಥರ ಜತೆ ಒಂಬತ್ತನೇ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು.

ಸೀತಾರಾಮನ್ ಅವರಲ್ಲದೇ ಹಣಕಾಸು ಕಾರ್ಯದರ್ಶಿ ಡಾ.ಬಿ.ಪಾಂಡೆ, ವೆಚ್ಚ ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಡಿಇಎ ಕಾರ್ಯದರ್ಶಿ ತರುಣ್ ಬಜಾಜ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಸ್ಟ್ರಾನ್ ಪ್ರಕರಣ: ನೌಕರರ ಸಮಸ್ಯೆ ಆಲಿಸಲು ಕನ್ನಡ ಸೇರಿ 5 ಭಾಷೆಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ 9ನೇ ಬಜೆಟ್ ಪೂರ್ವ ಸಮಾಲೋಚನೆಯನ್ನು ಉದ್ಯಮ, ಸೇವೆಗಳು ಮತ್ತು ವ್ಯಾಪಾರ ಮುಖ್ಯಸ್ಥರ ಜತೆ ನಡೆಸಿದರು. ಡಾ.ಬಿ.ಪಾಂಡೆ, ಟಿ.ವಿ.ಸೋಮನಾಥನ್, ತರುಣ್ ಬಜಾಜ್ ಮತ್ತು ಕೆ.ವಿ.ಸುಬ್ರಮಣಿಯನ್ ಸಹ ಭಾಗವಹಿಸಿದ್ದರು ಎಂದು ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.

ABOUT THE AUTHOR

...view details