ನವದೆಹಲಿ:ಕೋವಿಡ್ -19 ಬಿಕ್ಕಟ್ಟಿನಿಂದ ಪೀಡಿತವಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸಲು ಮುಂದಿನ ಮೂರು ವರ್ಷಗಳವರೆಗೆ ಕೆಲವು ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸ್ಥಗಿತಗೊಳಿಸುವ ಕುರಿತ ಕೆಲವು ರಾಜ್ಯಗಳ ನಿರ್ಧಾರವನ್ನು ಐಎಸ್ಎಫ್ ಒಕ್ಕೂಟ ಶ್ಲಾಘಿಸಿದೆ.
ಸರಳೀಕೃತ ಕಾರ್ಮಿಕ ಕಾನೂನುಗಳು ವೇಗದ ಬೆಳವಣಿಗೆ ಮತ್ತು ನೇಮಕಾತಿಯನ್ನು ಮುಂದೂಡುತ್ತವೆ. ಇದು ಉದ್ಯೋಗದಾತರಿಗೆ ಅವಕಾಶಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಇಂಡಿಯಾ ಸ್ಟಾಫಿಂಗ್ ಫೆಡರೇಷನ್ (ಐಎಸ್ಎಫ್) ಹೇಳಿದೆ.
ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತಮ್ಮ ರಾಜ್ಯಗಳಿಗೆ ಹೂಡಿಕೆಯನ್ನು ಆಕರ್ಷಿಸಲು ಕಾರ್ಮಿಕ ಕಾನೂನುಗಳ ಅವಕಾಶ ಪಡೆಯುತ್ತಿವೆ ಎಂದು ಐಎಸ್ಎಫ್ ಅಧ್ಯಕ್ಷ ಲೋಹಿತ್ ಭಾಟಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.