ನವದೆಹಲಿ:ಮುಂಗಡ ಪತ್ರ ಮಂಡನೆಗೂ ಮುನ್ನ 'ಆರ್ಥಿಕ ಸಮೀಕ್ಷೆ' ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಬಳಿಕ ಮಧ್ಯಾಹ್ನ 1.45ಕ್ಕೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೆ.ಸುಬ್ರಮಣಿಯನ್ ದೇಶದ ಆರ್ಥಿಕ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಲಿದ್ದಾರೆ.
ಹೇಗಿದೆ ದೇಶದ ಆರ್ಥಿಕಾಭಿವೃದ್ಧಿಯ ಆರೋಗ್ಯ? ಮಧ್ಯಾಹ್ನ ಮುಖ್ಯ ಆರ್ಥಿಕ ಸಲಹೆಗಾರರಿಂದ ಮಾಹಿತಿ - ಆರ್ಥಿಕ ಸಮೀಕ್ಷೆ
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೆ. ಸುಬ್ರಮಣಿಯನ್ ಅವರು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಧ್ಯಾಹ್ನ 1.45ಕ್ಕೆ ಸುದ್ದಿಗೋಷ್ಠಿ ನಡೆಸಿ, 2019-20ರ ಆರ್ಥಿಕ ಸಮೀಕ್ಷೆಯ ಬಗ್ಗೆ ವಿವರವಾದ ಮಾಹಿತಿ ನೀಡಲಿದ್ದಾರೆ.
![ಹೇಗಿದೆ ದೇಶದ ಆರ್ಥಿಕಾಭಿವೃದ್ಧಿಯ ಆರೋಗ್ಯ? ಮಧ್ಯಾಹ್ನ ಮುಖ್ಯ ಆರ್ಥಿಕ ಸಲಹೆಗಾರರಿಂದ ಮಾಹಿತಿ Economy Survey](https://etvbharatimages.akamaized.net/etvbharat/prod-images/768-512-5905381-thumbnail-3x2-presse.jpg)
ಆರ್ಥಿಕ ಸಮೀಕ್ಷೆ
ಭಾರತದ ಆರ್ಥಿಕ ಸಮೀಕ್ಷೆಯು ಏಪ್ರಿಲ್ 1ರಿಂದ ಮುಂದಿನ ವರ್ಷದಲ್ಲಿ ಶೇ 6 ರಿಂದ 6.5ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಬಜೆಟ್ನಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ವಿತ್ತೀಯ ಕ್ರಮಗಳ ಬಗ್ಗೆ ಉಲ್ಲೇಖವಿರಲಿದೆ. ಹೀಗಾಗಿ, ಸಮೀಕ್ಷೆ ಸಾಕಷ್ಟು ಕುತೂಹಲ ಮೂಡಿಸಿದೆ.
Last Updated : Jan 31, 2020, 1:39 PM IST