ಕರ್ನಾಟಕ

karnataka

By

Published : Mar 16, 2021, 1:55 PM IST

Updated : Mar 16, 2021, 2:08 PM IST

ETV Bharat / business

ಭಾರತೀಯ ರೈಲ್ವೆ ಪ್ರತಿಯೊಬ್ಬನ ಆಸ್ತಿ, ಎಂದಿಗೂ ಅದು ಖಾಸಗೀಕರಣಗೊಳ್ಳಲ್ಲ: ಸಚಿವ ಗೋಯಲ್ ಸ್ಪಷ್ಟನೆ

ಮೋದಿ ಸರ್ಕಾರ ರೈಲ್ವೆ ಹೂಡಿಕೆಯನ್ನು 2021-22ರ ಹಣಕಾಸು ವರ್ಷದಲ್ಲಿ 2.15 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ, 2019-20ರ ಆರ್ಥಿಕ ವರ್ಷದಲ್ಲಿ 1.5 ಲಕ್ಷ ಕೋಟಿ ರೂ.ಯಿಂದ ಹೆಚ್ಚಳವಾಗಿದೆ. ನಾವು ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸುತ್ತಿದ್ದೇವೆ..

Piyush Goyal
Piyush Goyal

ನವದೆಹಲಿ :ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ. ಆದರೆ, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಖಾಸಗಿ ಹೂಡಿಕೆಗೆ ಉತ್ತೇಜನ ನೀಡಬೇಕಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರತಿಪಾದಿಸಿದರು.

ರೈಲ್ವೆ ಯೋಜನೆಯ ಧನಸಹಾಯಕ್ಕಾಗಿ ಬೇಡಿಕೆಗಳ ಕುರಿತು ಚರ್ಚೆಗೆ ಉತ್ತರಿಸಿದ ಗೋಯಲ್, ಎರಡು ವರ್ಷಗಳಲ್ಲಿ ರೈಲು ಅಪಘಾತ ಸಂಭವಿಸದೆ ಯಾವುದೇ ಪ್ರಯಾಣಿಕರ ಸಾವು ಸಂಭವಿಸಿಲ್ಲ. ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದರು.

ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ದೇಶವು ಹೆಚ್ಚಿನ ಬೆಳವಣಿಗೆಯತ್ತ ಸಾಗಬಹುದು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದರು.

ಇದನ್ನೂ ಓದಿ: ಶರ ವೇಗದಲ್ಲಿ ಸಾಗುತ್ತಿದೆ ಇ-ಗೇಮ್​ ಗೀಳು: ನಿತ್ಯ ಚಟವಾಗುವತ್ತ ವಿಡಿಯೋ ಗೇಮ್​!

ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯನ ಆಸ್ತಿಯಾಗಿದೆ. ಅದು ಹಾಗೆಯೇ ಉಳಿಯುತ್ತದೆ. ಇದು ಭಾರತ ಸರ್ಕಾರದ ಬಳಿ ಉಳಿದುಕೊಳ್ಳಲಿದೆ ಎಂದು ಹೇಳಿದರು.

ಮೋದಿ ಸರ್ಕಾರ ರೈಲ್ವೆ ಹೂಡಿಕೆಯನ್ನು 2021-22ರ ಹಣಕಾಸು ವರ್ಷದಲ್ಲಿ 2.15 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ, 2019-20ರ ಆರ್ಥಿಕ ವರ್ಷದಲ್ಲಿ 1.5 ಲಕ್ಷ ಕೋಟಿ ರೂ.ಯಿಂದ ಹೆಚ್ಚಳವಾಗಿದೆ. ನಾವು ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸುತ್ತಿದ್ದೇವೆ.

ಕಳೆದ ಎರಡು ವರ್ಷಗಳಲ್ಲಿ ಯಾವುದೇ ಪ್ರಯಾಣಿಕರ ಸಾವು ಸಂಭವಿಸಿಲ್ಲ ಎಂದು ಹೇಳಲು ನನಗೆ ಸಂತೋಷವಾಗಿದೆ. ರೈಲು ಅಪಘಾತದಿಂದಾಗಿ ಕೊನೆಯ ಸಾವು 2019ರ ಮಾರ್ಚ್‌ನಲ್ಲಿ ಸಂಭವಿಸಿತ್ತು ಎಂದು ಸಚಿವರು ತಿಳಿಸಿದ್ದಾರೆ.

Last Updated : Mar 16, 2021, 2:08 PM IST

ABOUT THE AUTHOR

...view details