ನವದೆಹಲಿ:ಹಿಂದೊಮ್ಮೆ 'ಯಾವುದೇ ಕ್ರಿಯಾ ಯೋಜನೆ ಇಲ್ಲದೇ ಭ್ರಷ್ಟಾಚಾರ ಕೊನೆಗೊಳಿಸಲು ಹೇಗೆ ನಿರ್ಧರಿಸಿದ್ದೀರಾ' ಎಂದು ಸುಪ್ರೀಂಕೋರ್ಟ್ ವಿಷಾದ ವ್ಯಕ್ತಪಡಿಸಿತ್ತು. ಯುಪಿಎ ಆಡಳಿತಾವಧಿಯಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿಸಿ ಜನ ಲೋಕಪಾಲ್ ಮಸೂದೆ ಜಾರಿಗೆ ತರುವಂತೆ ರಾಷ್ಟ್ರರಾಜಧಾನಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಹಲವು ವರ್ಷಗಳು ಉರುಳಿದ್ದರೂ ಭಾರತದಲ್ಲಿ ಭ್ರಷ್ಟಾಚಾರ ಪ್ರಮಾಣ ಇನ್ನೂ ತಗ್ಗಿಲ ಎಂಬುದು ಇತ್ತೀಚಿನ ವರದಿಯಿಂದ ತಿಳಿದು ಬಂದಿದೆ.
ಭ್ರಷ್ಟಾಚಾರದ ವಾಚ್ಡಾಗ್ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ನ ಹೊಸ ವರದಿಯ ಪ್ರಕಾರ, ಶೇ 39ರಷ್ಟು ಲಂಚದ ಪ್ರಮಾಣ ಹೊಂದಿರುವ ಭಾರತವು ಏಷ್ಯಾದಲ್ಲಿ ಕಡುಭ್ರಷ್ಟ ರಾಷ್ಟ್ರ ಎಂಬ ಕಪ್ಪು ಚುಕ್ಕೆಗೆ ಭಾರತ ಪಾತ್ರವಾಗಿದೆ. ಇದಲ್ಲದೇ ಸಾರ್ವಜನಿಕ ಸೇವೆಗಳನ್ನು ಪಡೆಯಲು ಕೆಲವರು ವೈಯಕ್ತಿಕ ಸಂಬಂಧ ಸಾಧಿಸಬೇಕು ಅಥವಾ ಲಂಚ ಪಾವತಿಸಬೇಕಾಗಿದೆ.