ಕರ್ನಾಟಕ

karnataka

By

Published : Sep 11, 2019, 8:22 PM IST

ETV Bharat / business

ಮೋದಿ ಫಾಲೋವರ್ಸ್​ 5 ಕೋಟಿ ದಾಟಿದ್ರು, ಆದ್ರೆ 5 ಟ್ರಿಲಿಯನ್ ಆರ್ಥಿಕತೆ ಹೇಗೆ? ಕೈ ಮುಖಂಡ ಪ್ರಶ್ನೆ

ಟ್ವಿಟ್ಟರ್​ ಖಾತೆಯಲ್ಲಿ ಸರಣಿ ಟ್ವೀಟ್​ ಮಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ, 'ಮೋದಿ ಜೀ ಅವರ ಟ್ವಿಟ್ಟರ್ ಅನುಯಾಯಿಗಳು 50 ಮಿಲಿಯನ್ (5 ಕೋಟಿ) ದಾಟಿದ್ದಾರೆ. ಆರ್ಥಿಕತೆಯು 5 ಟ್ರಿಲಿಯನ್ (ಡಾಲರ್) ದಾಟಲಿದೆ, ಆದರೆ ಹೇಗೆ? ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೂ ಸಹ ನೀವು ವಿರೋಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಉಬರ್, ಓಲಾ ಎಲ್ಲವೂ ಹಾಳಾಗಿದೆ (ಉಬರ್, ಓಲಾ ನೆ ಸಬ್ ಕರ್ ದಿಯಾ ಬಂತಾಧರ್)' ಎಂದು ಬರೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಆರ್ಥಿಕ ಕುಸಿತದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟ್ವಿಟ್ಟರ್​ನಲ್ಲಿ ಟೀಕಿಸಿ, 'ಕುಸಿಯುತ್ತಿರುವ ಆರ್ಥಿಕತೆ ಮತ್ತು 5 ಟ್ರಿಲಿಯನ್​ ಡಾಲರ್​ ಆರ್ಥಿಕತೆಯತ್ತ ಭಾರತವನ್ನು ಹೇಗೆ ಕೊಂಡೊಯ್ಯುತ್ತಿರಾ' ಎಂದು ಪ್ರಶ್ನಿಸಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಸರಣಿ ಟ್ವೀಟ್​ ಮಾಡಿರುವ ಸಿಂಘ್ವಿ, 'ಮೋದಿ ಜೀ ಅವರ ಟ್ವಿಟ್ಟರ್ ಅನುಯಾಯಿಗಳು 50 ಮಿಲಿಯನ್ (5 ಕೋಟಿ) ದಾಟಿದ್ದಾರೆ. ಆರ್ಥಿಕತೆಯು 5 ಟ್ರಿಲಿಯನ್ (ಡಾಲರ್) ದಾಟಲಿದೆ, ಆದರೆ ಹೇಗೆ? ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೂ ಸಹ ನೀವು ವಿರೋಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಉಬರ್, ಓಲಾ ಎಲ್ಲವೂ ಹಾಳಾಗಿದೆ (ಉಬರ್, ಓಲಾ ನೆ ಸಬ್ ಕರ್ ದಿಯಾ ಬಂತಾಧರ್)' ಎಂದು ಬರೆದುಕೊಂಡಿದ್ದಾರೆ.

"ಯಾವುದೇ ಒಳ್ಳೆಯದನ್ನು ಮಾಡಿದ್ದೇವೋ ನಾವೂ (ಮೊಡಿನೋಮಿಕ್ಸ್). ಯಾವುದು ಕೆಟ್ಟದ್ದನ್ನು ಇತರರು ಮಾಡಿದ್ದಾರೋ (ನಿರ್ಮಲನೊಮಿಕ್ಸ್). ಆ ಬಳಿಕ ಜನರು ನಿಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ? (ಪಬ್ಲಿಕಾನೊಮಿಕ್ಸ್)" ಎಂದು ಮತ್ತೊಂದರಲ್ಲಿ ಪ್ರಶ್ನಿಸಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಬಿಎಸ್​-VI ಮತ್ತು ಜನರ ವಾಹನ ಖರೀದಿಯ ಮನೋಭಾವ ಬದಲಾಗಿ ಓಲಾ, ಉಬರ್​ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ, ವಾಹನೋದ್ಯಮ ಕುಸಿದಿದೆ ಎಂದು ಸಮರ್ಥನೆ ನೀಡಿದ್ದರು.

ABOUT THE AUTHOR

...view details