ನವದೆಹಲಿ:ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ ಲಿಮಿಟೆಡ್ (ಸಿಎಂಐಇ ) ಪ್ರಕಾರ, ಮಾರ್ಚ್ನಲ್ಲಿ ನಿರುದ್ಯೋಗ ದರವು ಶೇ 23.8 ರಷ್ಟಿದ್ದು, ಇದು ಈಗ ಶೇ 24.6ಕ್ಕೆ ಏರಿಕೆ (2020ರ ಮೇ 8) ಆಗಿದೆ ಎಂದು ಹೇಳಿದೆ.
ದಿಗ್ಬಂಧನದಿಂದ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ದರವು ಶೇ 13.08ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇ 14.53ಕ್ಕೆ ತಲುಪಿದೆ. ಇದರ ಜೊತೆಗೆ ಉದ್ಯೋಗಿಗಳ ಸಂಖ್ಯೆ ಕುಸಿಯುತ್ತಿದೆ ಎಂದು ಸಿಎಂಐಇ ವರದಿ ಮಾಡಿದೆ. ವಾಯುಯಾನ, ಪ್ರಯಾಣ, ಆತಿಥ್ಯ, ಚಿಲ್ಲರೆ ವ್ಯಾಪಾರ, ಉತ್ಪಾದನೆ ಮತ್ತು ವಾಹನ ಕ್ಷೇತ್ರಗಳು ಮೇಲು ಹೆಚ್ಚು ಪರಿಣಾಮ ಬೀರುತ್ತಿದೆ.
ಪ್ರಯಾಣ ಮತ್ತು ಆತಿಥ್ಯ
ಈ ವಲಯವು ಶೇ 12.75ರಷ್ಟು ಉದ್ಯೋಗ ಹೊಂದಿದೆ. ಇದರಲ್ಲಿ ಶೇ 5.56ರಷ್ಟು ನೇರ ಮತ್ತು ಶೇ 7.19ರಷ್ಟು ಪರೋಕ್ಷ. ಪ್ರವಾಸೋದ್ಯಮ ಸಚಿವಾಲಯದ 2019-20ರ ವಾರ್ಷಿಕ ವರದಿಯ ಪ್ರಕಾರ, 2018-19ರಲ್ಲಿ 87 ದಶಲಕ್ಷಕ್ಕೂ ಹೆಚ್ಚು ಜನರು ಪ್ರವಾಸೋದ್ಯಮದಲ್ಲಿ ದುಡಿಯುತ್ತಿದ್ದಾರೆ ಎಂದು ಹೇಳಿತ್ತು.
ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮವು ಸುಮಾರು 38 ಮಿಲಿಯನ್ ಉದ್ಯೋಗ ನಷ್ಟ ಎದುರಿಸುತ್ತಿದೆ. ಒಟ್ಟಾರೆ ಉದ್ಯೋಗಿಗಳಲ್ಲಿ ಶೇ 70ರಷ್ಟಿದೆ. ಎಂದು ಹಣಕಾಸು ಸೇವೆ ಮತ್ತು ವ್ಯವಹಾರ ಸಲಹಾ ಸಂಸ್ಥೆ ಕೆಪಿಎಂಜಿ ತನ್ನ ವರದಿಯಲ್ಲಿ ತಿಳಿಸಿದೆ.
ವಾಯುಯಾನ
ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ವಾಯುಯಾನ ಚಟುವಟಿಕೆಗಳು ಶೇ 66ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಸ್ತಬ್ಧವಾಗಿದೆ. ಎಂದು ಸಿಎಪಿಎ ಇಂಡಿಯಾ ಕಳೆದ ತಿಂಗಳು ನೀಡಿದ ವರದಿಯಲ್ಲಿ ತಿಳಿಸಿದೆ. ಏಪ್ರಿಲ್ 15ರಂದು ಜಾಗತಿಕ ವಿಮಾನಯಾನ ಸಂಸ್ಥೆಗಳ ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ (ಐಎಟಿಎ) ಭಾರತದ ವಾಯುಯಾನ ಕ್ಷೇತ್ರದಲ್ಲಿ 20ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಅಪಾಯದಲ್ಲಿದೆ ಎಂದಿದೆ.
ಆಟೋಮೊಬೈಲ್
ಭಾರತದ ವಾಹನ ವಲಯವು ಉತ್ಪಾದನಾ ಚಟುವಟಿಕೆಯ ಮತ್ತು ಮಾರಾಟದ ಸ್ಥಗಿತದಿಂದಾಗಿ ತೀವ್ರ ಕುಸಿತ ಕಂಡಿದೆ. ಬಹುತೇಕ ಘಟಕಗಳು ಮುಚ್ಚಿದ ಬಳಿಕ ದೊಡ್ಡ ವಾಹನ ಉತ್ಪಾದನಾ ಕಂಪನಿಗಳು ವೇತನ ಕಡಿತ ಘೋಷಿಸಿವೆ. ಮಾರಾಟಗಾರರ ಪುನರಾರಂಭದ ನಿರ್ಧಾರಕ್ಕೆ ಎದುರುನೋಡುತ್ತಿವೆ.
ರಿಯಲ್ ಎಸ್ಟೇಟ್
ಲಾಕ್ಡೌನ್ನಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರ ಸಹ ಅಪಾರ ನಷ್ಟ ಅನುಭವಿಸಿದೆ ಎಂದು ಅನಾರಾಕ್ ಗ್ರೂಪ್ ವರದಿಯಲ್ಲಿ ತಿಳಿಸಿದೆ. ವಸತಿ ಮಾರಾಟವು ಶೇ 25-35ರಷ್ಟು ಕುಸಿಯುತ್ತದೆ. ಕಚೇರಿ ಖರೀದಿ ವರ್ಷದಿಂದ ವರ್ಷಕ್ಕೆ ಶೇ 13-30ರಷ್ಟು ಕುಸಿಯುತ್ತದೆ.
ಎಂಎಸ್ಎಂಇ
ಸರ್ಕಾರದಿಂದ ಬೆಂಬಲ ಪಡೆದ ನಂತರವೂ ಬಹುತೇಕ ಉದ್ಯಮಗಳು ನಷ್ಟಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಹಾದಿಯಲ್ಲಿವೆ. ಆದಾಯ ಗಳಿಕೆ ಸಾಧ್ಯವಾಗುತ್ತಿಲ್ಲ. ಉದ್ಯಮಿಗಳು ಉಳಿವಿಗಾಗಿ ಹರಸಾಹಸ ಪಡುತ್ತಿದ್ದಾರೆ. ಸರ್ಕಾರಿ ಚಾಲಿತ ಪ್ರಚೋದಕ ಪ್ಯಾಕೇಜ್ ಇಲ್ಲದಿದ್ದರೆ ಇಡೀ ಜವಳಿ ಸರಪಳಿಯಲ್ಲಿ 10 ಮಿಲಿಯನ್ ಉದ್ಯೋಗಗಳು ಅಪಾಯದಲ್ಲಿದ್ದವು.