ಕರ್ನಾಟಕ

karnataka

ETV Bharat / business

ಆರ್ಥಿಕ ಹಿಂಜರಿತ ಇದೆ ಎಂಬುದು ಅಪ್ರಸ್ತುತ: ನೀತಿ ಆಯೋಗದ ಉಪಾಧ್ಯಕ್ಷ - niti aayog gdp forecast

ಕೋವಿಡ್​-19 ಸಾಂಕ್ರಾಮಿಕವು ಆರ್ಥಿಕ ಚಟುವಟಿಕೆಗಳ ಮೇಲೆ ಬಹುಗಂಭೀರವಾಗಿ ಋಣಾತ್ಮಕ ಪರಿಣಾಮ ಬೀರಿವೆ. ಆದರೆ, ಇದು ಸಂಪೂರ್ಣವಾಗಿ ನೈಸರ್ಗಿಕ ವಿಪತ್ತಿನ ಸ್ವರೂಪದಲ್ಲಿದ್ದು, ಸಾಮಾನ್ಯ ಆರ್ಥಿಕ ಚಕ್ರಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಆರ್ಥಿಕತೆಯು ಹಿಂಜರಿತದಲ್ಲಿದೆ ಎಂಬ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

Niti VC
ರಾಜೀವ್ ಕುಮಾರ್

By

Published : Dec 2, 2020, 5:12 PM IST

ನವದೆಹಲಿ: ಸಾಂಕ್ರಾಮಿಕ ಪ್ರೇರಿತ ಆಘಾತದಿಂದ ಭಾರತದ ಆರ್ಥಿಕತೆ ಹೊರಬರುತ್ತಿದ್ದು, ಜಿಡಿಪಿ ಬೆಳವಣಿಗೆ ಈ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ವಲಯ ಪ್ರವೇಶಿಸಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರದ ನೂತನ ಕೃಷಿ ಸುಧಾರಣಾ ಕಾಯ್ದೆಗಳು ಕೃಷಿಕರ ಆದಾಯ ಹೆಚ್ಚಿಸುವ ಗುರಿ ಹೊಂದಿವೆ. ಈ ಆಂದೋಲನವು ತಪ್ಪು ಗ್ರಹಿಕೆ ಮತ್ತು ಅಪಪ್ರಚಾರದ ಸಂವಹನದ ಪರಿಣಾಮವಾಗಿ ನಡೆಯುತ್ತಿದ್ದು, ಇದನ್ನು ತೆಗೆದು ಹಾಕಬೇಕಿದೆ ಎಂದರು.

ಎರಡನೇ ತ್ರೈಮಾಸಿಕದ ಜಿಡಿಪಿ ಅಂಕಿ-ಅಂಶಗಳು (ಶೇ7.5ರ ಸಂಕೋಚನ) ಸಾಂಕ್ರಾಮಿಕ ಪ್ರೇರಿತ ಕುಸಿತದ ಹಂತದಿಂದ ಆರ್ಥಿಕತೆಯು ಹೊರಬರುತ್ತಿದೆ ಎಂಬುದನ್ನು ಪ್ರತಿ ಬಿಂಬಿಸುತ್ತದೆ. ಮೂರನೇ ತ್ರೈಮಾಸಿಕದಲ್ಲಿ ನಾವು ವರ್ಷದ ಹಿಂದಿನ ಆರ್ಥಿಕ ಚಟುವಟಿಕೆಯನ್ನು ಸಾಧಿಸುತ್ತೇವೆ ಎಂಬುದು ನನ್ನ ನಿರೀಕ್ಷೆ ಎಂದು ಕುಮಾರ್ ಹೇಳಿದರು.

ಕ್ಲೈಮ್ಯಾಕ್ಸ್​ ತಲುಪಿದ ದೇಶಭ್ರಷ್ಟ 'ನಿಮೋ' ಹಸ್ತಾಂತರ ಕೇಸ್​: ಅಂತಿಮ ವಿಚಾರಣೆಗೆ ಡೇಟ್​ ಫಿಕ್ಸ್​!

ನಾಲ್ಕನೇ ತ್ರೈಮಾಸಿಕವು ಹಿಂದಿನ ವರ್ಷಕ್ಕಿಂತ ಅಲ್ಪವೇ ಆದರೂ ಸಕಾರಾತ್ಮಕ ಬೆಳವಣಿಗೆ ತೋರಿಲಿದೆ. ಏಕೆಂದರೆ ಸರ್ಕಾರವು ಈ ಅವಧಿಯಲ್ಲಿ ಅನೇಕ ರಚನಾತ್ಮಕ ಸುಧಾರಣೆಗಳಿಗೆ ಬಳಸಿಕೊಂಡಿದೆ. ಅದರಲ್ಲಿ ಕೆಲವು ಈಗಾಗಲೇ ಕಾರ್ಯರೂಪಕ್ಕೆ ಬಂದಿವೆ ಎಂದರು.

ಕೋವಿಡ್​-19 ಸಾಂಕ್ರಾಮಿಕವು ಆರ್ಥಿಕ ಚಟುವಟಿಕೆಗಳ ಮೇಲೆ ಬಹುಗಂಭೀರವಾಗಿ ಋಣಾತ್ಮಕ ಪರಿಣಾಮ ಬೀರಿವೆ. ಆದರೆ, ಇದು ಸಂಪೂರ್ಣವಾಗಿ ನೈಸರ್ಗಿಕ ವಿಪತ್ತಿನ ಸ್ವರೂಪದಲ್ಲಿದ್ದು, ಸಾಮಾನ್ಯ ಆರ್ಥಿಕ ಚಕ್ರಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಆರ್ಥಿಕತೆಯು ಹಿಂಜರಿತದಲ್ಲಿದೆ ಎಂಬ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದು ಕಿಡಿ ಕಾರಿದರು.

ABOUT THE AUTHOR

...view details