ಚೆನ್ನೈ:ಕೋವಿಡ್-19 ಸಂಕಷ್ಟದಿಂದ ರಾಜ್ಯ ಎದುರಿಸುತ್ತಿರುವ ಹಣಕಾಸಿನ ಸವಾಲು ಮತ್ತು ಮುಂದಿನ ಆರ್ಥಿಕ ನಿರ್ಧಾರದ ಬಗ್ಗೆ ಗಮನ ಹರಿಸಲು ಆರ್ಬಿಐನ ಮಾಜಿ ಗವರ್ನರ್ ಸಿ.ರಂಗರಾಜನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಸಮಿತಿ ಅರ್ಥಶಾಸ್ತ್ರಜ್ಞರು, ಕೈಗಾರಿಕೋದ್ಯಮಿಗಳು, ಉಪಕುಲಪತಿಗಳು, ಬ್ಯಾಂಕರ್ಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಉದ್ದಿಮೆ ತಜ್ಞರನ್ನು ಒಳಗೊಂಡಿರಲಿದೆ. ಸಮಿತಿಯು ತನ್ನ ಅಂತಿಮ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಬೇಕು. ಇದರ ಜೊತೆಗೆ ಸೂಕ್ತವೆಂದು ಪರಿಗಣಿಸಬಹುದಾದ ಅಂಶಗಳ ಮಧ್ಯಂತರ ವರದಿ ಸಹ ನೀಡಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಮಿತಿಯ ಉಲ್ಲೇಖಗಳ ನಿಯಮಗಳು:
* ಲಾಕ್ಡೌನ್ನ ಹೆಚ್ಚುವರಿ ವೆಚ್ಚ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳಿಂದ ವಿವಿಧ ಕ್ಷೇತ್ರಗಳ ಮೇಲೆ ಉಂಟಾಗುವ ತಕ್ಷಣದ ಮತ್ತು ಮಧ್ಯಮ ಅವಧಿಯ ಪರಿಣಾಮಗಳನ್ನು ನಿರ್ಣಯಿಸುವುದು