ನವದೆಹಲಿ:ಕೈಗಾರಿಕಾ ವಿವಾದ ಕಾಯ್ದೆ, 1947ರ ನಿಬಂಧನೆಗಳ ಪ್ರಕಾರ, ಕೆಲಸದಿಂದ ತೆಗೆದು ಹಾಕಿದ ಮೊದಲ 45 ದಿನಗಳ ಅವಧಿ ಮುಗಿದ ನಂತರ ಉದ್ಯೋಗದಾತರು ಯಾವುದೇ ಸಮಯದಲ್ಲಿ ಕಾರ್ಮಿಕರು ಅಥವಾ ಉದ್ಯೋಗಿಗಳನ್ನು ಹಿಂಪಡೆಯುವುದು ಕಾನೂನುಬದ್ಧವಾಗಿರುತ್ತದೆ.
ಈಗಿನ ಲಾಕ್ಡೌನ್ ಗಮನಿಸಿದರೆ ಕೆಲ ತಿಂಗಳ ತನಕ ವ್ಯವಹಾರ ಚಟುವಟಿಕೆ ಆರಂಭ ಆಗದಿರಬಹುದು. ಕೆಲವು ಕಂಪನಿ/ ಸಂಸ್ಥೆಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರಬಹುದು. ಅಂತಿಮವಾಗಿ ವಹಿವಾಟು ಮುಂದುವರಿಯದೇ ಸ್ಥಗಿತಗೊಳ್ಳಬಹುದು. ಇಂತಹ ಸಮಯದಲ್ಲಿ ಕೆಲಸಗಾರರಿಗೆ ಕುತ್ತು ಬರುವುದು ಸಹಜ. ಈ ವೇಳೆ ಕೈಗಾರಿಕಾ ವಿವಾದ ಕಾಯ್ದೆ ಹೇಳುವುದೇನು ಎಂಬುದರ ಸಂಕ್ಷೀಪ್ತ ಪರಿಚಯ ಇಲ್ಲಿದೆ.
ಗುರುಗ್ರಾಮ್ನ ಸೆಂಟ್ರಮ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ನ ಅನುಪಮ್ ಮಲಿಕ್ ಮಾತನಾಡಿ, ಮುಂದಿನ 5 ರಿಂದ 6 ತಿಂಗಳವರೆಗೆ ಯಾವುದೇ ವ್ಯವಹಾರ ನಡೆಯುದಿಲ್ಲ ಎಂದು ಅಂದಾಜಿಸಲಾಗಿದೆ. ಈ ಬಳಿಕ ಲಾಭದಾಯಕತೆ ಉಳಿಸಿಕೊಳ್ಳಲು ನಿಧಾನಗತಿಯ (ಟ್ರಿಕ್ಲಿಂಗ್) ವ್ಯವಹಾರ ಸಾಕಾಗುವುದಿಲ್ಲ. ಕೈಗಾರಿಕಾ ವಿವಾದಗಳ ಅಡಿಯಲ್ಲಿ ವಿವಿಧ ಆಯ್ಕೆಗಳನ್ನು ನೀಡಲಾಗಿದೆ ಎಂದರು.
ನೈಸರ್ಗಿಕ ವಿಪತ್ತಿನ ಪರಿಸ್ಥಿತಿಯಲ್ಲಿ ಉದ್ಯೋಗದಾತ ಕಂಪನಿ/ ಸಂಸ್ಥೆಗೆ ಕೆಲಸ ನೀಡಲು ಆಗದಿದ್ದರೇ ಅಸಮರ್ಥತೆಯ ಕಾಯ್ದೆಯ ಸೆಕ್ಷನ್ 2ರ (ಕೆಕೆಕೆ) ಅಡಿಯಲ್ಲಿ "ಲೇ-ಆಫ್" ಎಂಬ ವ್ಯಾಖ್ಯಾನದ ಪ್ರಕಾರ ನೌಕರರನ್ನು ವಜಾಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ಹಾಜರಿ ಆಗಲು ಸಾಧ್ಯವಿಲ್ಲ. ಅವರ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ಉದ್ಯೋಗದಾತರು ಕಾರ್ಮಿಕರ ಮತ್ತು ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ಜವಾಬ್ದಾರಿ ಹೊರಬೇಕಾದ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ, ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಮತ್ತು ಕರ್ಫ್ಯೂನಲ್ಲಿ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂಬುದುನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.