ಕರ್ನಾಟಕ

karnataka

By

Published : Sep 3, 2020, 4:04 PM IST

ETV Bharat / business

ಜನ ಕೂಡಿಟ್ಟ ಹಣದಿಂದ 52 ಕೋಟ್ಯಾಧೀಶ ಉದ್ಯಮಿಗಳ 68,907 ಕೋಟಿ ರೂ. ಸಾಲ ಮನ್ನಾ: ರಾಗಾ

2016ರ ನೋಟು ರದ್ದತಿಯ ಲಾಭ ಯಾರಿಗೆ ಸಿಕ್ಕಿತು? ಇದರ ಲಾಭವನ್ನು ಭಾರತದ ಅತಿದೊಡ್ಡ ಶತಕೋಟ್ಯಾಧಿಪತಿಗಳಿಗೆ ನೀಡಲಾಯಿತು. ನಿಮ್ಮ ಜೇಬಿನಲ್ಲಿ ನೀವು ಹೊಂದಿದ್ದ ಹಣ, ನಿಮ್ಮ ಮನೆಗಳಲ್ಲಿ ಇಟ್ಟಿದ್ದ ಹಣವನ್ನು ನೀವು ಬ್ಯಾಂಕ್​ಗಳಲ್ಲಿ ಇಟ್ಟಿದ್ದಿರೋ ಆ ಹಣವನ್ನು ಉದ್ಯಮಿಗಳ ಸಾಲಗಳನ್ನು ಮನ್ನಾ ಮಾಡಲು ಸರ್ಕಾರವು ತೆಗೆದುಕೊಂಡು ಹೋಗಿದೆ ಎಂದು ವಿಡಿಯೋದಲ್ಲಿ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

Rahul Gandhi
ರಾಹುಲ್ ಗಾಂಧಿ

ನವದೆಹಲಿ:ಕೊರೊನಾ ಪ್ರೇರೇಪಿತ ಲಾಕ್​ಡೌನ್​ ಹಾಗೂ ಕೊರೊನಾ ಪೂರ್ವದ ಜನರ ಉಪಭೋಗದ ಕುಸಿತದ ಪ್ರಭಾವದಿಂದ ದೇಶದ ಆರ್ಥಿಕತೆ ದಾಖಲೆಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಪ್ರತಿಪಕ್ಷಗಳು ಆಗಾಗ ಕೇಂದ್ರದ ವಿತ್ತೀಯ ನೀತಿಗಳನ್ನು ಟೀಕಿಸಿಕೊಂಡು ಬರುತ್ತಿವೆ.

ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಕೂಡ ತೀಕ್ಷ್ಣವಾಗಿ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜಿಡಿಪಿಗೆ ಸಂಬಂಧಿಸಿದ ದತ್ತಾಂಶವು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಆರ್ಥಿಕತೆಯು 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 23.9ರಷ್ಟು ಕುಗ್ಗಿದೆ. ಇದು ಸುಮಾರು 40 ವರ್ಷಗಳಲ್ಲೇ ಮೊದಲ ಬಾರಿಗೆ ಸಂಕುಚಿತಗೊಂಡಿದೆ.

ಈ ಬಳಿಕ ಪ್ರತಿಪಕ್ಷಗಳು ಕೇಂದ್ರದ ನಡೆಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. ಖಾಲಿ ಘೋಷಣೆ ಬದಲು ಯುವಕರಿಗೆ ಉದ್ಯೋಗ ನೀಡಿ ಎಂದಿದ್ದ ರಾಹುಲ್​ ಗಾಂಧಿ, ಇಂದು ಕೇಂದ್ರದ ಆರ್ಥಿಕ ನಡೆ ಖಂಡಿಸಿ ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಮೋದಿಜೀ ಅವರ 'ನಗದು ರಹಿತ ಭಾರತ' ನಿಜವಾಗಿಯೂ ಕಾರ್ಮಿಕ, ರೈತ, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ. 2016ರ ನವೆಂಬರ್ 8ರಂದು ತೆಗೆದುಕೊಂಡ ಭೀಕರ ನೋಟುರದ್ದತಿ ಪರಿಣಾಮ 2020ರ ಆಗಸ್ಟ್ 31ರಂದು ಅನಾವರಣಗೊಂಡಿತು ಎಂದು ಟ್ವೀಟ್​ ಮಾಡಿದ್ದಾರೆ.

ಜಿಡಿಪಿ ಕುಸಿತದ ಜೊತೆಗೆ ನೋಟು ರದ್ದತಿಯು ದೇಶದ ಅಸಂಘಟಿತ ಆರ್ಥಿಕತೆಯನ್ನು ಹೇಗೆ ಛಿದ್ರಗೊಳಿಸಿದೆ ಎಂಬುದನ್ನು ತಿಳಿಯಲು ನನ್ನ ವಿಡಿಯೋ ನೋಡಿ ಎಂದು ಬರೆದುಕೊಂಡಿದ್ದಾರೆ ರಾಹುಲ್​.

2016ರ ನೋಟು ರದ್ದತಿಯ ಲಾಭ ಯಾರಿಗೆ ಸಿಕ್ಕಿತು? ಇದರ ಲಾಭವನ್ನು ಭಾರತದ ಅತಿದೊಡ್ಡ ಶತಕೋಟ್ಯಾಧಿಪತಿಗಳಿಗೆ ನೀಡಲಾಯಿತು. ನಿಮ್ಮ ಜೇಬಿನಲ್ಲಿ ನೀವು ಹೊಂದಿದ್ದ ಹಣ, ನಿಮ್ಮ ಮನೆಗಳಲ್ಲಿ ನೀವು ಇಟ್ಟಿದ್ದ ಹಣವನ್ನು ಬ್ಯಾಂಕ್​ಗಳಲ್ಲಿ ಇಟ್ಟಿದ್ದೀರಾ. ಆದ್ರೆ ಆ ಹಣ ಉದ್ಯಮಿಗಳ ಸಾಲಗಳನ್ನು ಮನ್ನಾ ಮಾಡಲು ಸರ್ಕಾರವು ತೆಗೆದುಕೊಂಡು ಹೋಗಿದೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ನೋಟ್​ಬ್ಯಾನ್​ನ ಎರಡನೆಯ ಗುರಿಯು ಅನೌಪಚಾರಿಕ ಅಥವಾ ಅಸಂಘಟಿತ ವಲಯವನ್ನು ಒಳಗೊಂಡು ಇಡೀ ವ್ಯವಸ್ಥೆಯಿಂದ ಹಣವನ್ನು ಅಳಿಸಿಹಾಕುವ ಗುರಿ ಹೊಂದಿದೆ. ಪ್ರಧಾನಮಂತ್ರಿಯವರು ತಮಗೆ ಕ್ಯಾಶ್​​ಲೆಸ್​ ಭಾರತ ಬೇಕು ಎನ್ನುತ್ತಿದ್ದಾರೆ. ಆದರೆ ಕ್ಯಾಶ್​​ಲೆಸ್​ ಭಾರತವಿದ್ದರೆ, ಅನೌಪಚಾರಿಕ ವಲಯವು ನಾಶವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಜನರು ತಾವು ಉಳಿಸಿದ ಹಣವನ್ನು ಬ್ಯಾಂಕ್​ಗಳಲ್ಲಿ ಕೂಡಿಟ್ಟಿದ್ದ ಹಣ ಉದ್ಯಮಿಗಳ ಕೈಸೇರಿದೆ. ಈ ಹಣದಲ್ಲೇ ಸುಮಾರು 50 ಉದ್ಯಮಿಗಳ 68,607 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ರಾಹುಲ್​ ಗಾಂಧಿ ದೂರಿದ್ದಾರೆ.

ABOUT THE AUTHOR

...view details